ಶಿವಮೊಗ್ಗ : ಹುಬ್ಬಳ್ಳಿಯಿಂದ ಭದ್ರಾವತಿಗೆ ಬಂದಿದ್ದ ವ್ಯಕ್ತಿಯ ಕಾರು ಕಳವಾಗಿದೆ. ಕಾರು ಕದ್ದವರು ಬೇರೆ ಯಾರು ಅಲ್ಲ, ಆತ ಕಾರು ಮಾಲೀಕನ ಸಹೋದರ ಎಂಬುದು ವಿಶೆಷ.
ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಅಕ್ಷಯ್ ಕಾರು ಕಳೆದುಕೊಂಡವರು. ಕೋರ್ಟ್ ಕೇಸ್ ನಿಮಿತ್ತ ಅಕ್ಷಯ್ 2021 ರ ಅ. 27 ರಂದು ಭದ್ರಾವತಿ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಅಲ್ಲಿನ ಬಸ್ ನಿಲ್ದಾಣದ ಸಮೀಪದ ಲಾಡ್ಜ್ ಮುಂದೆ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಕೋರ್ಟ್ ಕೆಲಸ ಮುಗಿಸಿಕೊಂಡು ಲಾಡ್ಜ್ಗೆ ಬಂದಾಗ ಕಾರು ಕಾಣೆಯಾಗಿತ್ತು.
ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಕಾರು ಕದ್ದವರು ಆತನ ಸಹೋದರ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂಸಿಹಳ್ಳಿ ನಿವಾಸಿ ಅಖಿ ಲೇಶ್ ಎಂಬುದು ಗೋತ್ತಾಗಿದೆ. ಅಖಿಲೇಶ್ ನಕಲಿ ಕೀ ಬಳಸಿ ಕಾರು ಕಳವು ಮಾಡಿದ್ದ. ಬಳಿಕ ಅಕ್ಷಯ್ ತಮ್ಮ ಸ್ನೇಹಿತರು ಮತ್ತು ಸಂಬAಧಿಕರ ಮೂಲಕ ಕಾರು ಪಾಪಸ್ ನೀಡುವಂತೆ ತಿಳಿಸಿದರೂ ಒಪ್ಪಿರಲಿಲ್ಲ. ಹಾಗಾಗಿ ಅಕ್ಷಯ್ ಭದ್ರಾವತಿ ಠಾಣೆಗೆ ದೂರು ನೀಡಿದ್ದಾರೆ
Leave a Comment