ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೂತನ ಕೇಸ್ಗಳ ನಾಗಲೋಟ ಮುಂದುವರಿದ್ದು, ಒಂದೇ ದಿನ 15,617 ಕ್ಕೆ ಏರಿದೆ. ಸಿಲಿಕಾನ್ ಸಿಟಿಯ ಆರು ಮಂದಿ ಮಾರಕ ಸೋಂಕಿನ ಬಲಿಯಾಗಿದ್ದಾರೆ.
ಜೊತೆಗೆ 874 ಇಲ್ಲಿನ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು 73,654 ಸಕ್ರಿಯ ಪ್ರಕರಣಗಳಿದ್ದು, ಈ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಇಲ್ಲಿಯವರೆಗೆ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,34,957ಕ್ಕೆ ಏರಿದ್ದರೆ, ಬೆಂಗಳೂರಿನಲ್ಲಿ ಇದುವರೆಗೆ 12,44,869 ಮಂದಿ ಗುಣಮುಖರಾಗಿದ್ದಾರೆ.
ಬೆಂಗಳೂರೊAದರಲ್ಲೇ 16,433 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ತಿಳಿಸಿದೆ. ಇನ್ನು, ರಾಜ್ಯದಲ್ಲಿ ಮಂಗಳವಾರ 14,473 ರಷ್ಟಿದ್ದ ನೂತನ ಕೇಸ್ಗಳ ಸಂಖ್ಯೆ ಕೇವಲ 24 ಗಂಟೆಯಲ್ಲಿ 21,390 ಕ್ಕೆ ಏರಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಸಾವಿನ ಪ್ರಮಾಣವೂ ನಿಧಾನವಾಗಿ ಏರಿತ್ತಿರುವುದು ಗೋಚರಿಸಿದೆ. ಬುಧವಾರ ಬೆಂಗಳೂರಿನ ಆರು ಸೋಂಕಿತರು ಸೇರಿದಂತೆ ಒಟ್ಟು ಹತು ಮಂದಿ ನಂಜಿಗೆ ಬಲಿಯಾಗಿದ್ದಾರೆ.
Leave a Comment