ಕಾರವಾರ : ಜಿಲ್ಲಾ ಕೃಷಿ ಇಲಾಖೆಯು 2019 – 20 ನೇ ಸಾಲಿನ ಘೋಷಣಾ ಕಾರ್ಯಕ್ರಮದಡಿಯಲ್ಲಿ ಸಾವಯವ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಉತ್ಪನ್ನಗಳು ಮತ್ತು ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣೆ, ಮೌಲ್ಯ ವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರ್ಯಾಂಡಿಂಗ್ ಘಟಕಗಳಿಗೆ ಪ್ರೋತ್ಸಹ ಧನ ಒದಗಿಸುತ್ತಿದೆ.
ರಾಜ್ಯದ ಕೃಷಿ ಕ್ಷೇತ್ರ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪ್ರದೇಶ ಹಾಗೂ ಸಿರಿಧಾನ್ಯ ಪ್ರದೇಶಗಳಿಂದ ಉತ್ಪತ್ತಯಾಗುವ ಉತ್ಪನ್ನಗಳನ್ನು ಪೋಲಾಗದಂತೆ ಕ್ಷೇತ್ರ ಮಟ್ಟದಲ್ಲಿಯೇ ತಡೆಯಲು, ರೈತರು ಬೆಳೆದ ಉತ್ಪನ್ನಗಳಿಗೆ ಉತ್ತ ಬೆಲೆ ದೊರೆಕಿಸಿಕೊಡಲು ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಈ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಂಕಿಗ್ ಮತ್ತು ಬ್ರ್ಯಾಂಡಿಂಗ್ ಘಟಕಗಳ ಸ್ಥಾಪನೆ ಸೇರಿದಂತೆ ಒಟ್ಟಾರೆಯಾಗಿ ಅವುಗಳ ಮಾರುಕಟ್ಟೆ ಬಲವರ್ಧನೆಗೆ ಉತ್ತೇಜನ ನೀಡಿ ಗ್ರಾಹಕರಿಗೆ ಗುಣಮಟ್ಟದ ಉತ್ಟನ್ನಗಳನ್ನು ನಿರಂತರವಾಗಿ ಪೂರೈಸುವುದಾಗಿದೆ.
ಅರ್ಹ ನವೋದ್ಯಮಿಗಳು ರೈತ ಸಂಘಗಳು, ನೋಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ಖಾಸಗಿ ಉದ್ದಿಮೆದಾದರು, ಸಾರ್ವಜನಿಕ ವಲಯ ಘಟಕಗಳು, ಜಂಟಿ ವಲಯ ಘಟಕಗಳು ಮತು ಆಹಾರ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ ಅಥವಾ ಆಧುನೀಕರಣ ಉದ್ದಿಮೆಯಲ್ಲಿ ಕಾರ್ಯನಿರತರು ಅರ್ಹರು, ಸಾವಯುವ ಶುನ್ಯ ಬಂಡವಾಳ ನೈಸರ್ಗಿಕ ಕೃಷಿ ಉತ್ಪನ್ನಗಳು ಮತ್ತು ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣೆ ಮೌಲ್ಯವರ್ಧೆನೆ. ವರ್ಗಿðಕರಣ, ಪ್ಯಾಂಕಿAಗ್ ಮತ್ತು ಬ್ರಾö್ಯಂಡಿAಗ್ ಘಟಕಗಳಿಗೆ ಯೋಜನೆಯ ಪ್ರಸ್ತಾವನೆಯ ಒಟ್ಟೂ ವೆಚ್ಚದ ಮೇಲೆ ಪ್ರೋತ್ಸಾಹಧನವಾಗಿ ಎಲ್ಲ ವರ್ಗದವರು ಶೇ. 50 ರಷ್ಟು ಅಥವಾ ಗರಿಷ್ಟ 10 ಲಕ್ಷಗಳವರೆಗೆ ಪಡೆಯಬಹುದಾಗಿದೆ.
ಪ್ರೋತ್ಸಾಹ ಧನವನ್ನು ಎರಡು ಕಂತುಗಳಲ್ಲಿ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕಿನ ಸಹಾಯಕ ಕೃಷಿ ನಿದೇರ್ಶಕರ, ಉಪ ಕ್ರಷಿ ನಿರ್ದೇಶಕರ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿದೇರ್ಶಕ ಹೊನ್ನಪ್ಪ ಗೌಡ ತಿಳಿಸಿದ್ದಾರೆ.
Leave a Comment