ಕಾರವಾರ : ಕಾರವಾರ ಮತ್ತು ಅಂಕೋಲಾ ಹಾಲಕ್ಕಿ ಒಕ್ಕಲಿಗರಿಗೆ ಸೀಬರ್ಡ್ ನೌಕಾನೆಲೆಯಲ್ಲಿ ಭೂಮಿ ಕಳೆದುಕೊಂಡ ಕುಟುಂಬಕ್ಕೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತö್ಯ ನೀಡಲು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿAದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ದೇಶದ ಅತಿ ದೊಡ್ಡ ಸೀಬರ್ಡ ನೌಕಾನೆಲೆಗೆ ಭೂಮಿಯನ್ನು ತ್ಯಾಗ ಮಾಡಿದ ಹೆಮ್ಮೆ ನಮ್ಮದಾದರೆ, ಇದ್ದ ಜಮೀನು ಕಳೆದುಕೊಂಡು ಕೆಲಸವಿಲ್ಲದೆ ಕಾಲ ಕಳೆಯುವ ಸಮಸ್ಯೆ ನಮ್ಮದ್ದಾಗಿದೆ. ಅಂದು ಸರ್ಕರ ಮನೆಗೊಂದು ನೌಕರಿ ಕೊಡಿಸುವುದಾಗಿ ತಿಳಿಸಿದರು. ಆದರೆ ಇಲ್ಲಿಯತನಕ ಕನಸಾಗಿಯೇ ಉಳಿಸಿದೆ. ಎಲ್ಲಾ ಹುದ್ದೆಗಳು ಹೊರ ರಾಜ್ಯದವರ ಸಾಲಾಗಿ ಭೂಮಿ ಕಳೆದುಕೊಂಡು ನಿರಾಶ್ರಿತರಾದ ನಮಗೆ ಕವಡೆಕಾಸಿನ ಕಿಮ್ಮತ್ತಿಲ್ಲವಾಗಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ನೌಕಾನೆಲೆಯಲ್ಲಿ ಯಾವುದೇ ರೀತಿಯ ನೇಮಕಾತಿ ಆಯ್ಕೆ ನಡೆದರು ಸಹ ಮೊದಲು ನಿರಾಶ್ರಿತರಿಗೆ ಪ್ರಥಮ ಆಧ್ಯತೆನೀಡಬೇಕು. ಇಲ್ಲದಿದ್ದರೆ ಮತ್ತೆ ಹೊರ ರಾಜ್ಯದವರಿಗೆ ಆದ್ಯತೆ ನೀಡಿದರೆ ಅನಿವಾರ್ಯವಾಗಿ ನಾವು ಅನ್ಯಮಾರ್ಗ ತುಳಿಯಬೇಕಾಗುವುದು ಎಂದು ತಿಳಿಸಿದ್ದಾರೆ.
ನಿರಾಶ್ರಿತರಾದ ಹಾಲಕ್ಕಿ ಸಮಾಜದ ಕುಟುಂಬದ ಸದಸ್ಯರಿಗೆ ನೇಮಕಾತಿಯಲ್ಲಿ ಆದೇಶ ನೀಡ ಅವರ ಮೊಗದಲ್ಲಿ ಸಂತಸದ ಹೊನಲು ಚಿಮ್ಮುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Leave a Comment