ಮುಂಡಗೋಡ ತಾಲೂಕಿನ ಬಸಾಪುರದಲ್ಲಿ ಸಾರಿಗೆ ಬಸ್ ಚಾಲಕ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಬೆಳಿಗ್ಗೆ ಬಸಾಪುರದಿಂದ ಮುಂಡಗೋಡಿಗೆ ಹೊರಟಿದ್ದ, ಮುಂಡಗೋಡ – ಹುಲಿಹೊಂಡ – ಮುಂಡಗೋಡಿಗೆ ಬಸ್ ಅನ್ನು ಓರ್ವ ಯುವಕ ಹತ್ತಲು ಬಂದಿದ್ದ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಹೊರಟಿದ್ದ ಬಸ್ಗೆ ಕೂಗಿ ನಿಲ್ಲಿಸಿದ್ದಾರೆ. ಆದರೆ ಬಸ್ ನಿಲ್ಲಿಸಿದರೂ ಮತ್ತೋರ್ವ ಯುವಕ ಏಕಾಏಕಿ ಬಂದು ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ ಬಸ್ನಿಂದ ಚಾಲಕನ್ನು ಎಳೆದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಪರಿಣಾಮ ಚಾಲಕನ ಕೈಗೆ ಗಾಯವಾಗಿದೆ.
ಯುವಕರು ಪರಾರಿ : ಚಾಲಕನ ಮೇಲೆ ಹಲ್ಲೆ ಮಾಡಿ ಇನ್ನೇನು ಘಟನೆ ಪೊಲೀಸ್ ಠಾಣೆಯ ಮೇಟ್ಟಲೇರುತ್ತೆ ಅಂತಾತಿಳಿದ ತಕ್ಷಣವೇ ಹಲ್ಲೆಮಾಡಿರೋ ಇಬ್ಬರೂ ಯುವಕರು ಪರಾರಿಯಗಿದ್ದಾರೆಅನ್ನೂ ಮಾಹಿತಿ ಲಭ್ಯವಾಗಿದೆ. ಬಸಾಪುರ ಗ್ರಾಮಸ್ಥರು ಪ್ರಕರಣ ರಾಜೀ ಮಾಡಿಸಲು ಪ್ರಯತ್ನಿಸಿದ್ದಾರೆ. ಅದ್ರೆ ಹಲ್ಲೆಗೊಳಗಾದ ಚಾಲಕ ಮುಂಡಗೋಡ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ಬಂದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
Leave a Comment