ಹೊನ್ನಾವರ : ಪಟ್ಟಣದಲ್ಲಿ ಹಾದು ಹೋಗುವ ಫ್ಲೈ ಓವರ್ ನಿರ್ಮಾಣದ ವಿಳಂಬಕ್ಕೆ ಹಿಂದಿನ ಕ್ರಾಂಗ್ರೆಸ್ ಪಕ್ಷವೇ ಕಾರಣ ಎಂದು ಶಾಸಕ ದಿನಕರ ಶೆಟ್ಟಿ ಗಂಭೀರ ಆರೋಪ ಮಾಡಿದರು.

ಅವರು ಮಂಗಳವಾರ ತಾಲೂಕ ಪಂಚಾಯಿತಿ ಆವರದಲ್ಲಿ ವಿದ್ಯತ್ ಅವಘಡದಿಂದ ಕರ್ಕಿ ಈರಮ್ಮ ನಾಯ್ಕ ಇವರ ಗೋವು ಮೃತಪಟ್ಟಿರುವುದರಿಂದ ಇಲಾಖೆಯ ವತಿಯಿಂದ ನೀಡುವ ಪರಿಹಾರದ ಚೆಕ್ ಹಸ್ತಾಂತರದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊನ್ನಾವರದಲ್ಲಿ ವಾಹನಗಳ ಓಡಾಟ ಹೆಚ್ಚಿರುವುದರಿಂದ ಫ್ಲೆöÊ ಓವರ ಅವಶ್ಯಕತೆ ಇದೆ. ಅದನ್ನು ಹಿಂದಿನ ಸರ್ಕಾರ ಮನಗೊಂಡು ಯೋಜನೆ ರೂಪಿಸಬೇಕಿತ್ತು.
ತಾನು ಈ ಬಗ್ಗೆ ಪ್ರಯತ್ನಿಸುತ್ತಿದ್ದು, ಸಂಸದ ಅನಂತಕುಮಾರ ಹೆಗಡೆಯವರು ಮಾಡುಇವ ಭರವಸೆ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗಿದೆ. ನೂತನ ಬಸ್ ನಿಲ್ದಾಣ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಎ ಆರ್ ಟಿ ಓ ಕಛೇರಿಗೂ ಭೂಮಿ ಮಂಜೂರು ಮಾಡಲಾಗಿದೆ. ಅನೇಕ ರಸ್ತೆ ಕಾಮಗಾರಿಗಳು ಮಂಜೂರಾತಿಯ ಹಂತದಲ್ಲಿದೆ ಎಂದರು.
ಹೊನ್ನಾವರ ತಾಲ್ಲೂಕಿನ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಎಂದು ಆರೋಪಿಸುತ್ತಾರೆ. ಎರಡು ತಾಲೂಕಿಗೆ ಹೆಚ್ಚಿನ ಗಮನ ಹರಿಸುತ್ತಿದ್ದೇನೆ ಎಂದರು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ ಎಂದರು.
ಜಿಲ್ಲೆಯ ಮೀನುಗಾರರ ಮಹಿಳೆಯರಿಗೆ ಸಾಲಮನ್ನಾದಲ್ಲಿ ಅನ್ಯಾಯವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಥಮ ಬಾರಿಗೆ ಸಾಲಮನ್ನಾದ ಬಗ್ಗೆ ವಿಧಾನಸೌಧದಲ್ಲಿ ನಾನೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದೆ. ಆದರೆ ಉಡಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯವರು ಹೆಚ್ಚಿನ ಲಾಭ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಮಹಿಳೆಯರು ಸಾಲ ಮರು ಪಾವತಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ. ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಸದಸ್ಯರಾದ ಮಹೇಶ ಮೇಸ್ತ, ಮುಖಂಡರಾದ ರಘು ಪೈ, ಶ್ರಿಕಾಂತ್ ಮೊಗೇರ್, ರವಿ ನಾಯ್ಕ ರಾಯಲಕೇರಿ ಮತ್ತಿತರರು ಹಾಜರಿದ್ದರು.
Leave a Comment