ಶಿರಸಿ : 50 ಸಾವಿರ ರೂಪಾಯಿ ಮೌಲ್ಯದ 250 ಕೆ.ಜಿ ಎಮ್ಮೆಯ ಮಾಂಸ ಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ವಾಹನ ಸಮೇತ ಮಾಂಸ ಜಪ್ತುಪಡಿಸಿಕೊಂಡಿದ್ದಾರೆ.

ಹಾವೇರಿ ಜಿಲ್ಲೆ ಅಕ್ಕಿಆಲೂರಿನಿಂದ ದಾಸನಕೊಪ್ಪ ಕೊರ್ಲಕಟ್ಟಾ ಮಾರ್ಗವಾಗಿ ಪ್ಯಾಸೆಂಜರ್ ರಿಕ್ಷಾದಲ್ಲಿ ಎಮ್ಮೆಯ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು. ಶಿರಸಿ ಹೊಸ ಮಾರುಕಟ್ಟೆ ಠಾಣೆ ಪಿಎಸ್ಐ ಭೀಮಾಶಂಕರ್, ತಮ್ಮ ಸಿಬ್ಬಂದಿಯವರೊAದಿಗೆ ನಗರದ ಶಿರಸಿ ಹುಸರಿ ರಸ್ತೆಯ ಕಸ್ತೂರಬಾನಗರ ಕ್ರಾಸ್ ಸಮೀಪ ರಿಕ್ಷಾ ತಡೆದು ಪರಶೀಲಿಸಿದ್ದಾರೆ.
ಈ ವೇಳೆ ರಿಕ್ಷಾದಲ್ಲಿ ಎಮ್ಮೆಯ ಮಾಂಸ ಪತ್ತೆಯಾಗಿದೆ. ಮಾಂಸ ಸಾಗಾಟ ಮಾಡುತ್ತಿದ್ದ ಹಾವೇರಿ ಅಕ್ಕಿಆಲೂರಿನ ಮಟನ್ ವ್ಯಾಪಾರಿಯಾಗಿರುವ ಖಜಾಮುದ್ದೀನ್ ಅಲ್ಲಾಭಕ್ಷ ಬೇಪಾರಿ ಅಲ್ತಾಫ್ ಮುಲ್ಲಾ, ಹಾನಗಲ್ ನ ಮಂಜುನಾಥ ಬಾರ್ಕಿಯನ್ನು ಬಂಧಿಸಲಾಗಿದೆ.
ಇವರ ವಿದುದ್ಧ ಕಲಂ : 4, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಾಣಾ ಆಧ್ಯಾದೇಶ – 2020, ಕಲಂ 429 ಸಹಿತ 34 ಐ.ಪಿ.ಸಿ ಮತ್ತು ಕಲಂ 66 ಸಹಿತೆ 192 (ಎ) ಐ.ಎಮ್.ವಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ ಶ್ಲಾಘಿಸಿದ್ದಾರೆ.
Leave a Comment