ತಾಲೂಕಿನ
ಭಟ್ಕಳ: ವದೆ ಮಾಡುವ ಉದ್ದೇಶದಿಂದ ಹಿಂಸಾತ್ಮಕ ವಾಗಿ ಇಕ್ಕಟ್ಟಾದ ಪ್ರದೇಶದಲ್ಲಿ ಜಾನುವಾರು ಕಟ್ಟಿರುದನ್ನು ಗಮನಿಸಿದ ಪೊಲೀಸರು ದಾಳಿ ಮಾಡಿ ಜಾನುವರನ್ನು ರಕ್ಷಣೆ ಮಾಡಿರುವ ಘಟನೆ ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪ ನಡೆದಿದೆ.
ಯಾರೋ ಆರೋಪಿತರು ವದೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 60 ಸಾವಿರ ಮೌಲ್ಯದ 8 ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಭಟ್ಕಳ ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪದ ಹಾಡಿ ಜಾಗದಲ್ಲಿ ಹಿಂಸಾತ್ಮಕ ವಾಗಿ ಇಕ್ಕಟ್ಟಾಗಿ ಕಟ್ಟಿದ್ದಾಗ ಪೊಲೀಸರು ದಾಳಿ ನಡೆಸಿ 8 ಜಾನುವಾರುಗಳನ್ನು ರಕ್ಷಣೆ ಮಾಡಿದ್ದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದೆ .
Leave a Comment