ಬೆಂಗಳೂರು : ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಬುಧವಾರ ನಗರದ ಯಶವಂತಪುರ ಕಾರ್ಮಿಕ ಕಲ್ಯಾಣ ಮಂಡಳಿಯ ಕಚೇರಿಯಲ್ಲಿ ಮಂಡಳಿಯ 92ನೇ ಸಭೆಯನ್ನು ನಡೆಸಿದರು.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕ, ಮಾಲಿಕ ಮತ್ತು ಸರಕಾರದ ಅನುಪಾತ 20 ರೂ. 40 ರೂ 20 ರೂ ವಂತಿಕೆ ಪಾವತಿ ಮಾಡಲಾಗುತ್ತಿತ್ತು. ಅದನ್ನು 50 ರೂ, 100 ರೂ 50 ರೂ ಪರಿಷ್ಕರಣೆ ಮಾಡಬೇಕೆಂದು ನಡೆದ ಚರ್ಚೆಯಲ್ಲಿ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ, ಈಗಾಗಲೆ ಕೊವಿಡ್ ಸೊಂಕಿನ ಬಾರ ಎಲ್ಲರ ಮೇಲೆ ಇರುವುದುರಿಂದ, ಈಗಲೆ ಹೊರ ಹಾಕುವುದು ಬೇಡ ಜುಲೈ ನಂತರ ಪರಿಸೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡದ 18, ಉಡಪಿಯ 17, ಉತ್ತರ ಕನ್ನಡದ 4 ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಒಟ್ಟು 3425 ಮಹಿಳೆಯರಿಗೆ, ಉಚಿತ ಬಸ್ ಪಾಸ್ ನೀಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ಸೌಲಭ್ಯವನ್ನು ಪಡೆಯಲು ನಿಗದಿಪಡಿಸಿದ 21 ಸಾವಿರ ರೂ ಇದ್ದ, ವೇತನವನ್ನು 26 ಸಾವಿರ ರೂ. ಕ್ಕೆ ಏರಿಕೆ ಮಡಲು ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕರ್ಮಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಿ. ಕಲ್ಪನಾ, ಕಾರ್ಮಿಕ ಅಯುಕ್ತ ಅಕ್ರಂ ಪಾಷಾ, ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಪಾಪಣ್ಣ, ಮಹಿಳಾ ಸದಸ್ಯರಾದ ಲಾವಣ್ಯ ಮಂಡಳಿಯ ಕರ್ಯನಿರ್ವಹಣಾ ಅಧಿಕಾರಿ ಚಿದಾನಂದ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಪ್ರತಿನಿಧಿ. ಹಿಂದ್ ಮಜದೂರ್ ಕಿಸಾನ್ ಸಮಿತಿ ಪ್ರತಿನಿಧಿಗಳು, ಭಾರತ ಮಜದೂರ್ ಸಂಘಟನೆಯ ಪ್ರತಿನಿಧಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment