ಬೆಂಗಳೂರು : ದುಮಡುಪಾಳ್ಯ ಸಿನಿಮಾ ನೋಡಿದರೆ, ಭಯವಾಗುತ್ತದೆ. ಎಂದು ಟ್ವೀಟ್ ಮಾಡಿರುವ ನಗರದ ಮನೆ ಮಾಲೀಕರೊಬ್ಬರು, ದುಂಡುಪಾಳ್ಯದವರಿಗೆ ಮನೆ ಬಾಡಿಗೆಗೆ ಕೊಡಬಹುದಾ ಎಂದು ಪೊಲೀಸರ ಸಲಹೆ ಕೋರಿದ್ದಾರೆ.
ಬೆಂಗಳೂರು ಸಿಟಿ ಪೊಲೀಸ್ ಟ್ವೀಟರ್ ಖಾತೆಗೆ ತಮ್ಮ ಸಂದೇಶ ಟ್ಯಾಗ್ ಮಾಡಿರುವ ಕೃಷ್ಣಮೂರ್ತಿ ಎಂಬುವರು ಬಾಡಿಗೆಗೆ ನೀಡುವ ವಿಚಾರದಲ್ಲಿ ದಯವಿಟ್ಟು ಸಹಾಯ ಮಾಡಿ ಎಂದಿದ್ದಾರೆ.
ಇತ್ತೀಚೆಗೆ ನಮ್ಮ ಮನೆಗೆ ಬಾಡಿಗೆದಾರರು ಬಂದಿದ್ದಾರೆ. ಅವರ ಆಧಾರ್ ಪರಶೀಲಿಸಿದಾಗ, ದಂಡುಪಾಳ್ಯ ಗ್ರಾಮದವರು ಎಂದು ಗೊತ್ತಾಗಿದೆ. ಈ ಗ್ರಾಮದವರು ಕೊಲೆ ಮಾಡಿ ಆಭರಣ ದೋಚುತ್ತಾರೆಂಬುದನ್ನುಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ ದೃಶ್ಯಗಳನ್ನು ನೋಡಿ ಭಯವೂ ಆಗಿತ್ತು.
ಇದೀಗ ಅದೇ ಗ್ರಾಮದ ನಿವಾಸಿ ನಮ್ಮ ಮನೆ ಬಾಡಿಗೆಗೆ ಬಂದಿದ್ದಾರೆ. ಬಾಡಿಗೆಕೊಡಬಹುದೇ ಎಂದೂ ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ. ಅದಕ್ಕೆ ಪೊಲೀಸರು, ಮನೆ ಸಮೀಪದ ಠಾಣೆಗೆ ಹೋಗಿ, ಅವರು ನಿಮಗೆ ಸಹಾಯ ಮಾಡುತ್ತಾರೆ ಎಂದಿದ್ದಾರೆ.
Leave a Comment