ಬೆಂಗಳೂರು : ಹಿಂಜಬ್ ಗೊಂದಲದ ಕಾರಣದಿಂದ ಬಂದ್ ಆಗಿದ್ದ ಇಯುಸಿ ಕಾಲೇಜುಗಳು ದಿ. ೧೬ ರಿಂದ ಪುನರಾರಂಭಗೊಳ್ಳಲಿವೆ.
ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾಲೇಜು ಪುನರಾರಂಭದ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಶಿಕ್ಷಣ ಇಲಾಖೆ ಸಚಿವ ಬಿ.ಸಿ ನಾಗೇಶ್ ಟ್ವೀಟ್ ಮಾಡಿದ್ದಾರೆ.
ಸೋಮವಾರ ಫ್ರೌಢಶಾಲೆಯ ತರಗತಿಗಳು ಆರಂಭವಾಗಿದ್ದು, ಅನೇಕ ಕಡೆ ಗೊಂದಲ ಸೃಪ್ಟಿಸಿತ್ತು. ಹೈಕೋರ್ಟ್ ಆದೇಶವಿದ್ದರೂ ಅದನ್ನು ದಿಕ್ಕರಿಸಿ ಅನೇಕ ಕಡೆಗಳಲ್ಲಿ ಹಿಜಬ್ ಧರಿಸಿ ಯುವತಿಯರು ಶಾಲೆಗೆ ಆಗಮಿಸಿದ್ದರು. ಎಸ್ ಎಸ್ ಎಲ್ ಸಿ ಪೂರ್ವಸಿದ್ದತಾ ಪರೀಕ್ಷೆಯನ್ನು ಬರೆಯದೇ ತೆರಳಿದ್ದರು.
Leave a Comment