ಕಾರವಾರ : ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಗೋವಾದಿಂದ ಕರ್ನಾಟಕ ಪ್ರವೇಶಿಸುವವರಿಗೆ ಆರ್ಟಿಪಿಸಿಆರ್ ನೆಗಟಿವ್ ವರದಿ ಕಡ್ಡಾಯವೆಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು, ಇದೀಗ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಹಿಂಪಡೆದಿದೆ.
ಜನವರಿ ಮೊದಲ ವಾರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಅಧಿಕವಾಗಿತ್ತು. ಒಂದೆರಡು ದಿನದ ಮಧ್ಯದಲ್ಲಿಯೇ ಸೋಂಕಿನ ಪ್ರಮಾಣ ದುಪ್ಪಟ್ಟಾಗಿ ಎಲ್ಲರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಗೋವಾ ರಾಜ್ಯದಲ್ಲಿ ಕೂಡ ಸೋಂಕಿನ ಪ್ರಮಾಣ ಹೆಚ್ಚಾಗಿ, ಹೊಸ ವರ್ಷಾಚರಣೆಗೆ ಗೋವಾಕ್ಕೆ ತೆರಳಿ ಬಂದವರಿAದ ಜಿಲ್ಲೆ ಹಾಗೂ ರಾಜ್ಯದಲ್ಲಿ ಸೋಂಕು ಉಲ್ಬಣವಾಗುತ್ತಿದೆ ಎನ್ನಲಾಗಿತ್ತು.
ಈ ಹಿನ್ನಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ, ಗೋವಾದಿಂದ ರಾಜ್ಯ ಪ್ರವೇಶಿಸುವಾಗ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಗಡಿಗಳಲ್ಲಿ ಚೆಕ್ ಪೋಸ್ಟ್ಗಳನ್ನ ನಿರ್ಮಿಸಿ. ರೈಲ್ವೆ, ರಸ್ತೆ ಮಾರ್ಗ ಹಾಗೂ ಪ್ರವಾಸಿ ವಾಹನಗಳಲ್ಲಿ ಯಾರೇ ಅಲ್ಲಿಂದ ರಾಜ್ಯಕ್ಕೆ ಪ್ರವೇಶಿಸುವವರಿದ್ದರೂ ಕಡ್ಡಯವಾಗಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹಾಗೂ ಎಡರು ಡೋಸ್ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರ ತೋರಿಸಲ್ಲೇ ಬೇಕು ಎಂದು ಸರ್ಕಾರ ಆದೇಶಿಸಿತ್ತು.
ಜಿಲ್ಲೆಯಲ್ಲಿ ಕಾರವಾರ ತಾಲೂಕಿನ ಮಜಾಳಿ ಹಾಗೂ ಜೋಯಿಡಾ ತಾಲೂಕಿನ ಅನಮೋಡ್ನಲ್ಲಿ ತಾತ್ಕಾಲಿಕ ಕೋವಿಡ್ ಚೆಕ್ ಪೋಸ್ಟ್ ನಿರ್ಮಿಸಿ ಯಾರೇ ಗೋವಾದಿಂದ ಬಂದರೂ ಆರ್ಟಿಪಿಸಿಆರ್ ನೆಗಟಿವ್ ವರದಿಯನ್ನ ಪರೀಶೀಲಿಸಿಯೇ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು.
ಗೋವಾ ರಾಜ್ಯದೊಂದಿಗೆ ಜಿಲ್ಲೆಯ ಜನರ ಪ್ರತಿನಿತ್ಯದ ಒಡನಾಟವಿದೆ. ಗೋವಾಕ್ಕೆ ನೂರಾರು ಜನ ಕೆಲಸಕ್ಕಾಗಿ ಜಿಲ್ಲೆಯಿಂದ ಹೋಗಿ ಬರುತ್ತಿದ್ದು, ಅಂಥವರಿಗೆ ವಾರಕ್ಕೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆಗೊಳ ಪಡಿಸಿ, ತಹಶೀಲ್ದಾರ್ ಕಚೇರಿಯಿಂದ ಪಾಸ್ ಪಡೆದು ತೆರಳಲು ಅವಕಾಶ ನೀಡಲಾಗಿತ್ತು.
ಕೋವಿಡ್ ಕಡಿಮೆಯಾದರೂ ಈ ನಿಯಮಗಳನ್ನು ಸಡಿಲಗೊಳಿಸದ ಕಾರಣ ಜನ ಸಂಕಷ್ಟ ಅನುಭವಿಸುಂತಾಗಿತ್ತು. ಹೀಗಾಗಿ ಈಗ ಗೋವಾ ಮತ್ತು ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಿದ್ದ ಆದೇಶವನ್ನು ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಟಿ.ಕೆ. ಅನೀಲ್ ಕುಮಾರ್ ಹಿಂಪಡೆದು ಆದೇಶಿಸಿದ್ದಾರೆ. ಚೆಕ್ ಪೊಸ್ಟ್ ನಲ್ಲಿ ಎರಡು ಡೋಸ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ತೋರಿಸಿ ರಾಜ್ಯ ಪ್ರವೇಶ ಮಾಡಬೇಕು ಎಂದು ಆದೇಶಿಸಲಾಗಿದೆ.
ಪ್ರವಾಸೋದ್ಯಮದ ಮೇಲೆ ಧನಾತ್ಮಕ ಪರಿಣಾಮ
ಪ್ರವಾಸೋದ್ಯಮದ ಉತ್ತರ ಕನ್ನಡ ಹಾಗೂ ನೆರೆಯ ಗೋವಾಕ್ಕೆ ಸಾಕಷ್ಟು ಸಂಬAಧವಿದೆ ಆರ್ಟಿಪಿಸಿಆರ್ ನೆಗಟಿವ್ ವರದಿ ಕಡ್ಡಾಯ ಆದೇಶ ಹಿಂಪಡೆದಿರುವುದರಿAದ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಹೊರ ದೇಶಗಳಿಂದ ಗೋವಾಕ್ಕೆ ಆಗಮಿಸುವ ಪ್ರವಾಸಿಗರು, ಜಿಲ್ಲೆಯ ಕರಾವಳಿ ಭಾಗದ ಗೋಕರ್ಣ, ಮುಡೇಶ್ವರ ಸೇರಿದಂತೆ ಹಲವು ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಿದ್ದರು.
ಗೋವಾಕ್ಕೆ ತೆರಳಲು ರಾಜ್ಯ, ಹೊರ ರಾಜ್ಯದ ಪ್ರವಾಸಿಗರು ಗಡಿ ಜಿಲ್ಲೆಯಾದ ಹಿನ್ನಲೆಯಲ್ಲಿ ಉತ್ತರ ಕನ್ನಡದಲ್ಲಿ ಸುತ್ತಾಡಿ, ನಂತರ ಗೋವಾದತ್ತ ಮುಖ ಮಾಡುತ್ತಾರೆ. ಆದರೆ ಆರ್ಟಿಪಿಸಿ ಕಡ್ಡಾಯ ಮಾಡಿದ್ದರಿಂದ ಪ್ರವಾಸೋದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.
ಆದರಲ್ಲೂ ಮಾರ್ಚ್, ಏಪ್ರಿಲ್ ವೇಳೆ ಸಾಕಷ್ಟು ಪ್ರವಾಸಿಗರು ಜಿಲ್ಲೆ. ಗೋವಾದತ್ತ ಮುಖ ಮಾಡಲಿದ್ದಾರೆ. ಆರ್ಟಿಪಿಸಿಆರ್ ಕಡ್ಡಾಯವಿರುವ ಹಿನ್ನಲೆಯಲ್ಲಿ ಈ ಬಾರಿ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎನ್ನಲಾಗಿತ್ತು. ಸದ್ಯ ರಾಜ್ಯ ಸರ್ಕಾರ ಆರ್ಟಿಪಿಸಿಆರ್ ಕಡ್ಡಾಯ ಆದೇಶ ಹಿಂತೆಗದುಕೊAಡಿರುವುದರಿAದ ಇದು ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎನ್ನಲಾಗಿದೆ.
Leave a Comment