ಅಂಕೋಲಾ : ಕಾಲೇಜಿನ ಹೋಗಲೆಂದು ಬಸ್ ಹತ್ತಲು ಬಂದ ವಿದ್ಯಾರ್ಥಿನಿಯೋರ್ವಳಿಗೆ ಬಸ್ ಬಡಿದು ಆಕೆ ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹಾರವಾಡಾದ ರಿಯಾ ರಂಗಾ ಪೆಟೇ ಎನ್ನುವ ವಿದ್ಯಾರ್ಥಿನಿ ಗಾಯಗೊಂಡವಳಾಗಿದ್ದಾಳೆ. ಈಕೆ 2ನೇ ವರ್ಷ ಡಿಪ್ಲೋಮಾ ಕಲಿಯುತ್ತಿದ್ದು ಕಾರವಾರದ ಕಾಲೇಜಿಗೆ ಹೋಗಲು ಅವರ್ಸಾ ಬಳಿ ಬಸ್ ಹತ್ತಲು ಬಂದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಅಪಘಾತವಾದ ಕೆಲ ಹೊತ್ತಿನಲ್ಲಿ ವಿದ್ಯಾರ್ಥಿನಿ ವಾಂತಿ ಮಾಡಿದ್ದು ಅದರಲ್ಲಿ ರಕ್ತ ಕಾಣಿಸಿಕೊಂಡಿದ್ದರಿAದ ತಕ್ಷಣವೇ ಆಕೆಯನ್ನು ಆಂಬುಲೆನ್ಸ್ ಮೂಲಕ ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು, ಅಲ್ಲಿಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ತಲೆ ಸ್ಕಾö್ಯನಿಂಗ್ ಮಾಡಬೇಕೆಂದು ಸೂಚಿಸಿದರು.
ಬಳಿಕ ವಿದ್ಯಾರ್ಥಿಯನ್ನು ಹೊನ್ನಾವರಕ್ಕೆ ಕರೆದೊಯ್ಯಲಾಗಿದೆ. ಅವರ್ಸಾ ಭಾಗದಲ್ಲಿ ಬಸ್ ನಿಲ್ದಾಣ ಇಲ್ಲದಿರುದರಿಂದ ಮೇಲಿಂದ ಮೇಲೆ ಇಂತಹ ಅಪಘಾತಗಳು ನಡೆಯುತ್ತಿವೆ. ಈ ಹಿಂದೆಯೂ ವಿದ್ಯಾರ್ಥಿಗಳು ಬಸ್ ಹತ್ತುವ ಸಂದರ್ಭದಲ್ಲಿ ಚಾಲಕ ಬಸ್ ಚಲಾಯಿಸುತ್ತಿರುವ ಸನ್ನಿವೇಶಗಳನ್ನು ಸ್ಥಳೀಯರು ಸೆರೆ ಹಿಡಿದು ಈ ಕುರಿತು ಪ್ರತಿಭಟಿಸಿದ್ದರು.
ವಿದ್ಯಾರ್ಥಿ ಕಂಡ ತಕ್ಷಣ ಬಸ್ ಚಾಲಕ ಬಸ್ ನಿಲ್ಲಿಸದೆ ಮುಂದೆ ಹೋಗುತ್ತಿದ್ದು ಈ ಕುರಿತು ಚಾಲಕರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ತಕ್ಷಣವೇ ಬಸ್ ಚಾಲಕ ಈ ಅಪಘಾತದಲ್ಲಿ ಬಸ್ ಚಾಲಕರ ತಪ್ಪಿಲ್ಲ. ನನದೇ ತಪ್ಪಿದೆ ಎಂದು ವಿದ್ಯಾರ್ಥಿನಿಯಿಂದ ಪತ್ರ ಬರೆಯಿಸಿ ಪಡೆದಿರುವ ಬಗ್ಗೆ ತಿಳಿದ ಸ್ಥಳೀಯರು ಬಸ್ ಚಾಲಕನ ವಿರುದ್ದ ಅಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿನಿಯಿಂದ ಆತ ಪಡೆದ ಪತ್ರ ಮರಳಿ ಪಡೆದ ಪ್ರಸಂಗವೂ ನಡೆಯಿತು.
Leave a Comment