ಕಾರವಾರ : ರಾಷ್ಟಿçÃಯ ಹೆದ್ದಾರಿ – 66 (17) ಅಗಲೀಕರಣ ಯೋಜನೆ ಸಂಬAಧಿಸಿದAತೆ ನಿಗದಿತ ಕಲಾವಧಿಯಲ್ಲಿ ಕಾಮಗಾರಿ ಪ್ರಗತಿ ಆಗದೇ ಇದ್ದಲ್ಲಿ ಸಂಬAಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಮುಲ್ಲೆöÊ ಮಹಿಲನ್ ಎಚ್ಚರಿಕೆ ನೀಡಿದ್ದಾರೆ.
ಯೋಜನೆಗೆ ಸಂಬAಧಿಸಿದAತೆ ಮಂಗಳೂರಿನ ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೆಶಕರು ಮತ್ತು ಯೋಜನೆ ವ್ಯವಸ್ಥಾಪಕರು, ಐ.ಆರ್.ಬಿ, ಕುಮಟಾ ಅವರರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕಾಮಗಾರಿ ತ್ವರಿಗೊಳಿಸುವಂತೆ ಸೂಚಿಸಿದರು.
ರಾಷ್ಟಿçÃಯ ಹೆದ್ದಾರಿ ಕಾಮಗಾರಿಯಲ್ಲಿ ವಿಪರೀತ ವಿಳಂಬವಾಗಿರುವುದರ ಬಗ್ಗೆ ಹಲವರು ಸಂಘಟನೆಗಳು, ನಾಗರೀಕರು, ಜಿಲ್ಲಾಡಳಿತಕ್ಕೆ ಪದೇ ಪದೇ ಮನವಿ ನೀಡುತ್ತಿದ್ದಾರೆ. ಈಗಾಗಲೇ ಅಂಕೋಲಾ ಬಾಳಗುಳಿ ಯಲ್ಲಿ ಟೋಲ್ ಗೇಟ್ ಆರಂಭಿಸಿ ಟೋಲ್ ಕಲೆ ಕ್ಷನ್ ಮಾಡುತ್ತಿದ್ದರೂ ಕಾಮಗಾರಿ ಪ್ರಗತಿ ನರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದರು.
ಕಾರವಾರ, ಕುಮಟಾ ಹಾಗೂ ಭಟ್ಕಳ ಉಪವಿಭಾಗಕ್ಕೆ ಸಂಬAಧಿಸಿದAತೆ ರಸ್ತೆ ಕಾಮಗಾರಿ ಹಾಗೂ ಪ್ಲೆöÊ ಓವರ್ ರಸ್ತೆ ಕಾಮಗಾರಿ ಇನ್ನುವರೆಗೂ ಪೂರ್ಣಗೊಳ್ಳದೇ ಇರುವ ಬಗ್ಗೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ನವೆಂಬರ್ – 2021 ಅಂತ್ಯದವರೆಗೆ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ತಿಳಿಸಲಾಗಿತ್ತು. ಆದರೆ ಅವಧಿ ಮೀರಿದರೂ ಯವುದೇ ಕಾಮಗಾರಿ ಪೂರ್ತಿಗೊಳಿಸಲು ಆಸಕ್ತಿವಹಿಸರಿರುವ ಬಗ್ಗೆ ಜಿಲ್ಲಾಧಿಕಾರಿಗಳು ಅಸಮಾಧಾನ ಹೊರಹಾಕಿದರು.
Leave a Comment