ಮೀನುಗಾರಿಕೆಗೆ ತೆರಳಿದ ಯುವಕನೊರ್ವ ಸಮುದ್ರದಲ್ಲಿ ಬಿದ್ದು ಸಾವನ್ನಪಿರುವ ಘಟನೆ ಭಟ್ಕಳ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ನಡೆದಿದೆ.

ಮೃತ ಯುವಕನನ್ನು ನಾಗರಾಜ ಶ್ರೀಧರ ಮೊಗೇರ ಎಂದು ತಿಳಿದು ಬಂದಿದೆ.ಈತ ಮೀನುಗಾರಿಕೆ ತೆರಳಿದ ವೇಳೆ ಸಮುದ್ರದಲ್ಲಿ ಮೀನಿಗಾಗಿ ಬಲೆ ಹಾಕಿದ ಸಂದರ್ಭದಲ್ಲಿ ಅಲೆಯ ರಭಸದಿಂದ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ಕಾಣಿಯಾಗಿದ್ದ.ನಂತರ ಆತನ ಮೃತದೇಹಕ್ಕಾಗಿ ತಪಾಸಣೆ ನಡೆಸಲಾಗಿದ್ದು ನಂತರ ಮೃತ ದೇಹ ಪತ್ತೆಯಾಗಿದ್ದು ಈ ಕುರಿತು ಭಟ್ಕಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bhatkal News ; Join our whatsapp group
Leave a Comment