ಹೊನ್ನಾವರ:ಮೋಟಾರ್ ಅಪಘಾತ ವಿಮಾ ಪರಿಹಾರವನ್ನು ನ್ಯಾಯಾಲಯದ ಪ್ರಕಾರ ನೀಡಲು ವಿಫಲವಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ. ಆದೇಶದ
ಪ್ರಕಾರದ ನ್ಯಾಯಾಲಯದ ಸಿಬ್ಬಂದಿ ಬುಧವಾರ ಜಪ್ತಪಡಿಸಿ ನ್ಯಾಯಾಲಯಕ್ಕ ಹಾಜರುಪಡಿಸಿದ್ದಾರೆ.
2014ರ ಫೆ. ರಂದು ಮಂಗಳೂರು ಕಡೆಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ಶರಾವತಿ ಸೇತುವೆ ಸಮೀಪ ಶ್ರೀದೇವಿ ಆಸ್ಪತ್ರೆ ತಿರುವಿನ ಬಳಿ ಬೈಕ್ ಸವಾರ ಗಣಪತಿ ಮೇಸ್ತ ಎಂಬುವರಿಗೆ ಅಪಘಾತಪಡಿಸಿ ಅವರ ಸಾವಿಗೆ ಕಾರಣವಾಗಿತ್ತು.
ಅಪಘಾತದಿಂದ ಮರಣ ಪಟ್ಟ ಗಣಪತಿ ಮೇಸ್ತ ಕುಟುಂಬವು ಅಪಘಾತ ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯದ ತೀರ್ಪಿನ ಪ್ರಕಾರ ಸಾರಿಗೆಸಂಸ್ಥೆ ಬಾಗಲಕೋಟೆ ವಿಭಾಗ ಪರಿಹಾರ ಹಣವನ್ನು ಭರಣ ಮಾಡಿರಲಿಲ್ಲ.
ಇದರಿಂದ ಮೃತನ ಕುಟುಂಬವು ಪರಿಹಾರದ ಹಣ ತುಂಬದ ಸಾರಿಗೆ ಸಂಸ್ಥೆಯ ಬಸ್ ನ್ನು ಜಪ್ತಪಡಿಸಿಕೊಳ್ಳಲು ಕೋರಿದ್ದರು. ಈ ನಡುವೆ ಹೊನ್ನಾವರ ಎಂ.ಎ.ಸಿ.ಟಿ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಜಿ. ಬಸ್ ಜಪ್ತಿಪಡಿಸಿಕೊಳ್ಳಲು ಆದೇಶ ನೀಡಿದ್ದರು.
ಸಿಬ್ಬಂದಿಗಳಾದ ವೆಂಕಟ್ರಮಣ ಗೌಡ. ಶಿವಾನಂದ ಶೆಟ್ಟಿ. ಸುರೇಶ ಮತ್ತು ಪ್ರಾಶಾಂತ ನ್ಯಾಯಾಲಯದ ಆದೇಶದ ಪ್ರಕಾರ ಹೊನ್ನಾವರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 2.45 ಕ್ಕೆ ಬಾಗಲಕೋಟೆ ಡಿಪೋದ ಮಂಗಳೂರಿಗೆ ಹೊರಟ ಬಸ್ ನ್ನು ವಶಪಡಿಸಿಕೊಂಡರು.
ಪರಿಹಾರ ಹಣದಲ್ಲಿ ಕೇವಲ ರೂ. 2 ಲಕ್ಷ ಮೊತ್ತವನ್ನು ಮಾತ್ರ ಸಾರಿಗೆ ಸಂಸ್ಥೆಯ ಭರಣ ಮಾಡಿತ್ತು ನ್ಯಾಯಾಲಯದ ಆದೇಶದ ಪ್ರಕಾರ ತುಂಬಬೇಕಾದ ಹಣವನ್ನು ತುಂಬದೇ ಕಾಲಹರಣ ಮಾಡುತ್ತಿತ್ತು.
ಅನಿವಾರ್ಯವಾಗಿ ಸಂಸ್ಥೆಯ ಚರಾಸ್ಥಿಗಳಾದ ಬಸ್ ವಶಪಡಿಸಿಕೊಳ್ಳಲು ಕೊರಲಾಯಿತು. ನ್ಯಾಯಾಲಯವು ನೀಡಿದ ಆದೇಶದ ಪ್ರಕಾರ ಬಾಗಲಕೋಟೆ ಡಿಪೋ ಬಸ್ ನ್ನು ಜಪ್ತಪಡಿಸಿಕೊಳ್ಳಲಾಗಿದೆ ಅರ್ಜಿದಾರರ ಕುಂಟುAಬಕ್ಕೆ ಬರಬೇಕಾದ ಹಣ ಇನ್ನಾದರೂ ಸಂಸ್ಥೆ ತುಂಬಬಹುದೆAಬ ನಿರೀಕ್ಷೆ ಇದೆ.
ರವಿ. ಎನ್. ಹೆಗಡೆ ಭಾಸ್ಕೇರಿ ಸಂತ್ರಸ್ತರಪರ ವಕೀಲರು
Leave a Comment