ಭಟ್ಕಳ : ಸರ್ಕಾರ ಜನಸಾಮಾನ್ಯರಿಗೆ ತಂದ ಯೋಜನೆಗಳು ದಲ್ಲಾಳಿಗಳ ಪಾಲಾಗುತ್ತಿದ್ದು ಇದರಿಂದ ಜನರು ಬವಣೆ ಪಡುವಂತಾಗಿದೆ. ಇಂತಹ ಸ್ಥಿಯಿಂದ ಪಾರು ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಯೋಜನೆ ರಾಜ್ಯ ಸರ್ಕಾರಿ ಜಾರಿಗೆ ತಂದಿದೆ ಎಂದು ಭಟ್ಕಳ ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ಶನಿವಾರ ಮಾರುಕೇರಿ ಗ್ರಾಮ ಪಂಚಾಯಿತಿ ಕೋಟಖಂಡದ ಪ್ರಾಥಮಿಕ ಶಾಲೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಒನ್ ಮೂಲಕ ಜನರ ಮನೆಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುತ್ತಿದೆ. ಕಂದಾಯ ಇಲಾಖೆಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು.
ಕಂದಾಯ ಸೇವೆಗಳು ಜನರ ಮನೆಗ ಬಾಗಿಲಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು ತಹಶೀಲ್ದಾರ ಅಶೋಕ ಭಟ್ ಮಾತನಾಡಿ ಕಂದಾಯ ಇಲಾಖೆಯಿಂದ ಪಿಂಚಣಿ ಅರ್ಹ ಕುಟುಂಬಗಳ ಮನೆ ಬಾಗಿಲಿಗೆ ಮಂಜೂರಿ ಪತ್ರ ನೀಡುವ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ತೀರಸ್ಕçತಗೊಂಡ ಹಲವಾರು ಅರ್ಜಿಗಳನ್ನು ಪುನರ್ ಪರಿಶೀಲಿಸಿ ಆದೇಶ ಪತ್ರ ನೀಡಲಾಗಿದೆ. ಭಟ್ಕಳ ತಹಶೀಲ್ದಾರ ಕಛೇರಿಯಲ್ಲಿ ಹಲವು ಸುಧಾರಣೆ ತರಲಾಗಿದೆ.
ಪಿಂಚಣಿ, ಭೂ ಪರಿವರ್ತನೆ ಸೇರಿದಂತೆ ಹಲವು ಅರ್ಜಿಗಳನ್ನು ಆಧ್ಯತೆಯ ಮೇಲೆ ಅನುಮೋದನೆ ನೀಡಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಕೂಡ ತಪ್ಪುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸ್ಥಳೀಯರು ಪ್ರಾಥಮಿಕ ಶಾಲೆಯ ಕಾಂಪೌAಡ್ ಶಿಥಿಲವಾಗೊಂಡಿರುವುದರಿAದ ಕಾಪೌಂಡ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದು, ಸ್ಥಳದಲ್ಲೇ ಕಾಂಪೌAಡ್ ನಿರ್ಮಾಣಕ್ಕೆ ಅನುದಾನ ವದಗಿಸಿ ಸಂಬAಧಿಸಿದ ಅಧಿಕಾರಿಗಳಿಗೆ ಮುಂದಿನ ಕ್ರಮ ಜರುಗಿಸುವಂತೆ ಶಾಸಕರು ಸೂಚಿಸಿದ್ದಾರೆ. ಮಾರುಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಸ್ತಿ ಗೊಂಡ, ಉಪಾಧ್ಯಕ್ಷ ನಾಗವೇಣಿ ಗೊಂಡ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
Leave a Comment