ಹೊನ್ನಾವರ : ಪ್ರಸಕ್ತ ಸಾಲಿನಲ್ಲಿ ಹೊನ್ನಾವರ ಪಟ್ಟಣ ಪಂಚಾಯತಿಯ 12,03,01,600 ಮೊತ್ತದ ಬಜೆಟ್ ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ್ ಮೇಸ್ತ ಮಂಡಿಸಿದರು.

ಪಟ್ಟಣಕ್ಕೆ ವಿವಿಧ ಮೂಲಗಳಿಂದ ಬರುವ ಆದಾಯದ ಕುರಿತಾಗಿ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಒಂದು ವರ್ಷದವರೆಗೆ ಸಂತೆ ಮಾರುಕಟ್ಟೆ ಹಾಗೂ ಬೀದಿಬದಿ ವ್ಯಾಪಾರಸ್ಥರಿಂದ ಕರೆ ವಸೂಲಿಯ ಟೆಂಡರ್ 10,16,500 ಮೊತ್ತಕ್ಕೆ ಹರಾಜಾಗಿದ್ದು, ತುಳಿಸಿನಗರದ ವಿನಾಯಕ ಅಚಾರಿ ಪಡೆದಿದ್ದಾರೆ. ಮೀನು ಮಾರುಕಟ್ಟೆಯು ಜಲದೇವತಾ ಮೀನುಗಾರ ಸಂಘದ ನಾಗರತ್ನ ಮೇಸ್ತ 1.90ಲಕ್ಷ ಪಡೆದಿದ್ದಾರೆ.
ಅಲ್ಲದೆ ಇತರೆ ಮೂಲದ ಆದಾಯ ಹಾಗೂ ಖರ್ಚಿನ ಕುರಿತು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ನೆರೆ ಜಿಲ್ಲೆ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗದಲ್ಲಿ ಉದ್ಭವಿಸಿದ ಜಾತ್ರೆ ಮಾರುಕಟ್ಟೆ ಮಳಿಗೆ ಹರಾಜು ಕಿಚ್ಚು ಸಭೆಯಲ್ಲಿ ಚೆರ್ಚೆಯಾಯಿತು. ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಉಂಟಾದ ಗೊಂದಲ ಸಭೆಯ ಮುಕ್ತಾಯದ ವೇಳೆಗೆ ಚರ್ಚೆಗೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ವಿಜಯ ಕಾಮತ್ ಹಾಗೂ ಮಹೇಶ್ ಮೇಸ್ತ ಏಪ್ರಿಲ್ 10 ರಂದು ಹೊನ್ನಾವರ ಜಾತ್ರೆ ನಡೆಯಲಿದೆ. ಈ ಸಮಯದಲ್ಲಿ ಯಾವ ರೀತಿಯಾಗಿ ಹರಾಜು ಪ್ರಕ್ರಿಯೆ ನಡೆಸುತ್ತೀರಿ ಎಂದು ಪ್ರಶ್ನಿಸಿದರು. ದೇಶದ ಕಾನೂನು ಹೈಕೋರ್ಟ್ ಆದೇಶಕ್ಕೆ ಮುನ್ನಣೆ ನೀಡದವರಿಗೆ ಮುಜರಾಯಿ ಇಲಾಖೆ ಆದೇಶವಿದ್ದರೆ ಕಟ್ಟುನಿಟ್ಟಾಗಿ ಅವರಿಗೆ ನೀಡದೇಹಿಂದುಗಳಿಗೆ ಮಾತ್ರ ನೀಡಬೇಕು ಎಂದು ಒತ್ತಾಯಿಸಿದರು.
ಅಂತಿಮವಾಗಿ ಜಿಲ್ಲಾಡಳಿತ ಹಾಗೂ ಸಂಭAಧಿಸಿದ ಇಲಾಖೆಯಿಂದ ಈ ಬಗ್ಗೆ ಮಾಹಿತಿ ಪಡೆದು ಒಂದೆರಡು ದಿನದಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸದಸ್ಯರು ಸಲಹೆ ನೀಡಿದರು. ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರವೀಣಕುಮಾರ್, ಸದಸ್ಯರು, ಸಿಬ್ಬಂದಿ ಇದ್ದರು.
Leave a Comment