ಬೆಂಗಳೂರು: ಕಾಲು ನೋವಿಗೆ ಮಸಾಜ್ ಮಾಡುವ ನೆಪದಲ್ಲಿ ಚಿನ್ನದ ಸರ ಕಳವು ಮಾಡಲಾಗಿದ್ದು, ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ವೃದ್ಧೆಯೊಬ್ಬರು ದೂರು ನೀಡಿದ್ದಾರೆ. ಅಪರಿಚಿತ ಮಹಿಳೆ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
`ಮನೆಗೆ ಸಾಮಗ್ರಿ ತರಲೆಂದು ವೃದ್ಧೆ, ಅಂಗಡಿಗೆ ಹೋಗಿ ವಾಪಸು ಬರುತ್ತಿದ್ದರು. ಕಾಲು ನೋವು ಇದ್ದಿದ್ದರಿಂದ ನಿಧಾನವಾಗಿ ನಡೆಯುತ್ತಿದ್ದರು. ಅವರನ್ನು ತಡೆದಿದ್ದ ಮಹಿಳೆ, ‘ಕಾಲು ನೋವಿಗೆ ಔಷಧಿ ಇದ್ದು, ಕಾಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ನಿವಾರಣೆಯಾಗುತ್ತ ದೆ’ ಎಂದಿದ್ದರು.’ ‘ಆರೋಪಿ ಮಾತು ನಂಬಿದ್ದ ವೃದ್ಧೆ, ಅವರನ್ನು ಮನೆಗೆ ಕರೆದೊಯ್ದಿದ್ದರು. ಮಸಾಜ್ ಮಾಡುತ್ತಿದ್ದಾಗಲೇ ಆರೋಪಿ, ವೃದ್ಧೆ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾ ರೆ” ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
Leave a Comment