ಶಿರಸಿ: ಯುವತಿಯೋರ್ವಳು ರಾತ್ರೋರಾತ್ರಿ ಮನೆಯಿಂದ ಕಾಣೆಯಾದ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಶಾಂತಿನಗರದ ಐಶ್ವರ್ಯ ರಾಜೇಶ ಹಂಚಿನಮಠ (೧೯) ಕಾಣೆಯಾದ ಯುವತಿ. ಈಕೆ ಮಾ.೨೮ ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದಳು. ರಾತ್ರಿ ೨ ಗಂಟೆಗೆ ತಂದೆ ಎದ್ದು ಬಂದಾಗ ಮಗಳು ಅಲ್ಲಿ ಇರಲಿಲ್ಲ. ಮಾ.೨೯ ರಂದು ಸಂಬAಧಿಕರು, ಗೆಳಯರ ಮನೆಯಲ್ಲಿ ವಿಚಾರಿಸಲಾಯಿತು.
ಆದರೆ ಆಕೆಯ ಸುಳಿವು ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿ ಅವಳನ್ನು ಹುಡುಕಿಕೊಡುವಂತೆ ತಂದೆ ದೂರಿನಲ್ಲಿ ಕೇಳಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment