ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯ ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಸರಾಯಿ ಮಾರಾಟ ನಡೆಯುತ್ತಿದ್ದು, ಸುಲಭವಾಗಿ ಸಿಗುವ ಮದ್ಯ ಕುಡಿದು ಅಮಲಿನಲ್ಲಿ ಪ್ರತಿವರ್ಷ ಹತ್ತಾರು ಮೀನುಗಾರರು ಸಾವನ್ನಪ್ಪುತ್ತಿದ್ದಾರೆ .
ರಾತ್ರಿಯೂ ಇಂತುಹುದೆ ಘಟನೆ ನಡೆದು ನೂರಾರು ಸಂಖ್ಯೆಯ ಮೀನುಗಾರರು ಪ್ರತಿಭಟನೆ ನಡೆಸಿದರು. ಮುರ್ಡೇಶ್ವರ ಮೂಲದ ದಾಮೋದರ ಕುಪ್ಪಾ ನಾಯ್ಕ(೪೪) ಮೃತ ಮೀನುಗಾರ. ತಾಲೂಕಿನ ನೇತ್ರಾಣಿ ಸಮುದ್ರದ ಬಳಿ ಮೀನುಗಾರನ ಶವ ಪತ್ತೆಯಾಗುತ್ತಿರುವಂತೆ ಮೀನುಗಾರರ ಆಕ್ರೋಶ ಭುಗಿಲೆದ್ದಿದೆ. ಶವವನ್ನು ಎದುರಿಗಿಟ್ಟೆ ಪ್ರತಿಭಟನೆಗೆ ಸಿದ್ದರಾಗಿದ್ದಾರೆ.
ಮಾವಿನಕುರ್ವೆ ಪಂಚಾಯಿತಿಯ ವ್ಯಾಪ್ತಿಯಲ್ಲಿ ಒಂದೆ ಒಂದು ಸರಾಯಿ ಅಂಗಡಿಯಿಲ್ಲ, ಆದರೆ ಇಲ್ಲಿನ ಗೂಡ ಅಂಗಡಿ, ರೇಶನ್ ಅಂಗಡಿಗಳಲ್ಲೂ ಸಮಯದ ಪರಿವೆ ಇಲ್ಲದೆ ಮದ್ಯ ಸರಬರಾಜು ಆಗುತ್ತಿದೆ. ಪೊಲೀಸರಿಗೆ ದೂರು ನೀಡಿದರೆ ಪಟ್ಟಣದಿಂದ ಪೊಲೀಸರು ಇಲ್ಲಿ ಬರುವವರೆಗ ಇಲ್ಲಿನ ಚಿತ್ರಣವೆ ಬದಲಾಗುತ್ತಿದೆ. ಇಲಾಖೆಯ ಕೆಲ ಸಿಬ್ಬಂದಿ ಇಲ್ಲಿನ ಸರಾಯಿ ಮಾರಾಟಾಗಾರರ ನಡುವೆ ಹೊಂದಾಣಿಕೆ ಮಾಡಿಕೊಂಡಿರುವದು ಇದಕ್ಕೆ ಕಾರಣ ಎನ್ನುವದು ಸ್ಥಳೀಯರ ಆಕ್ರೋಶ
ಇದ್ದು ಇಲ್ಲದಂತಾದ ಅಬಕಾರಿ ಇಲಾಖೆ
ತಾಲೂಕಿನ ಅಬಕಾರಿ ಇಲಾಖೆ ಇಲ್ಲಿಯವರೆಗೂ ಅಕ್ರಮ ಮದ್ಯ ಮಾರಾಟದ ಕುರಿತು ಯಾವೊಂದು ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಮದ್ಯ ಸರಬರಾಜು ಮಾಡುವವರನ್ನು ರಹಸ್ಯವಾಗಿ ಹಿಡಿಯಲು ಪ್ರಯತ್ನವೆ ನಡೆಸುತ್ತಿಲ್ಲ. ಪೊಲೀಸ್ ಇಲಾಖೆ ದಾಖಲಿಸಿದಷ್ಟು ಪ್ರಕರಣವನ್ನು ಅಬಕಾರಿ ಇಲಾಖೆ ದಾಖಲಿಸುತ್ತಿಲ್ಲ ಎಂದು ಸ್ಥಳಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿದ್ದಾರೆ. ಕಳೆಚ ನಾಲ್ಕೆöÊದು ವರ್ಷದಿಂದ ಮಾವಿನಕುರ್ವೆಯಲ್ಲಿ ಸರಾಯಿ ಮಾರಾಟ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಆರೋಪಿಸಿದ್ದಾರೆ.
Leave a Comment