ಹುಬ್ಬಳ್ಳಿ: ಟಿಸಿ-5ಜಿ ಬಿಎಸ್ಎನ್ಎಲ್ ಮೊಬೈಲ್ ಟಾವರ್ ಇನ್ಸ್ಟಾಲ್ಮೆಂಟ್ ಎನ್ನುವ ಪ್ಲಾನ್ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭವಾಗುವುದಾಗಿ ನಂಬಿಸಿ ನಗರದ 8 ಜನರಿಗೆ ಒಟ್ಟು 16.79 ಲಕ್ಷ ರೂಗಳನ್ನು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಪ್ರೊಮಕುಮಾರ ಮಲ್ನಾಡ್ ಎಂಬುವರು ದೂರು ದಾಖಲಿಸಿದ್ದಾರೆ. ದೂರುದಾರರಿಗೆ ಪರಿಚಯದವರಾದ ರೇಣುಕಾ ಕಿಂಗ್ಸ್ಟನ್ ಎಂಬುವರು ಹೂಡಿಕೆ ಮಾಡಲು ತಿಳಿಸಿದ್ದಾರೆ. ನಂತರ ಲಿಂಕ್ ಮೂಲಕ ಕಂಪನಿಯ ಮ್ಯಾನೇಜರ್ ಎಂಬ ಅಮಲಾ ಪೌಲ್ ಟೆಲಿಕಾಮ್ ಅವರ ಮೊಬೈಲ್ ನಂಬರ್ ಕಳುಹಿಸಿದ್ದಾರೆ.
ಇದನ್ನು ನಂಬಿ ಅವರೊಂದಿಗೆ ಚಾಟ್ ಮಾಡಿದ ದೂರುದಾರರು ವಿವಿಧ ಪ್ಲಾನ್ಗಳಿಗೆ 3.62 ಲಕ್ಷ ಹಾಗೂ ಪತ್ನಿಯ ಹೆಸರಿನಲ್ಲಿ 1.37 ಲಕ್ಷ ಹಾಕಿದ್ದಾರೆ. ನಂತರ ಪರಿಚಯದವರಾದ ಮಲ್ಲಿಕಾರ್ಜುನ ಮೆಣಸಿನಕಾಯಿ 7.34 ಲಕ್ಷ, ಮೃತ್ಯುಂಜಯ ಹಿರೇಮಠ 1.07 ಲಕ್ಷ, ಕಲಾವತಿ ಹಿರೇಮಠ 67 ಸಾವಿರ, ಕುಮಾರ ರೇಷ್ಮೆ 35 ಸಾವಿರ, ಅಶೋಕ ಕೊಡಟಗೇರಿ 9 ಸಾವಿರ, ಜಯ ಶ್ರೀ ರೇಷ್ಮೆ9 ಸಾವಿರ, ಮುತ್ತಪ್ಪ 1.11 ಲಕ್ಷ, ನಾಗೇಂದ್ರ 1.03 ಲಕ್ಷ ಸೇರಿ ಒಟ್ಟು 16,79 ಲಕ್ಷ ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment