ಚಾಮರಾಜನಗರ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪಾಲಕರು ಆರೋಪಿಸಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಯಳಂದೂರು ತಾಲೂಕಿನ ಅಗರ ಗ್ರಾಮದ ಶ್ಯಾಮಲಾ ಮತ್ತು ಮಂಜುನಾಥ್ ದಂಪತಿ ಮಗು ಮೃತಪಟ್ಟಿದೆ.
ಮಗು ಹುಟ್ಟಿದ ಬಳಿಕ ನಾಲ್ಕು ದಿನ ಚೆನ್ನಾಗಿತ್ತು, ಐದನೇ ದಿನ ಮಗುವಿಗೆ ಬ್ಲಡ್ ಇನ್ಫೆಕ್ಷನ್, ಜಾಂಡೀಸ್ ಆಗಿದೆ ಎಂಬ ರಿಪೋರ್ಟ್ ಬಂದಿದೆ. ನಂತರ ಪರೀಕ್ಷೆಗೆ ಒಳಪಡಿಸಿ ರಿಪೋರ್ಟ್ ಬಂದ ಒಂದು ದಿನವಾದರೂ ವೈದ್ಯರು ಚಿಕಿತ್ಸೆ ನೀಡಿಲ್ಲ, ಮೈಸೂರಿಗೂ ರೆಫರ್ ಮಾಡಿಲ್ಲ ವೈದ್ಯರು ಮತ್ತು ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆಂದು ಪಾಲಕ ಮಂಜುನಾಥ್ ದೂರಿದ್ದಾರೆ.
ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಮೇಲೆ ತಡವಾಗಿ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ರಿಪೋರ್ಟ್ ಬಂದ ತಕ್ಷಣವೇ ಮೈಸೂರಿಗೆ ಕಳುಹಿಸಿದ್ದರೆ ಮಗು ಬದುಕುಳಿಯುತ್ತಿತ್ತು. ವೈದ್ಯರು ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave a Comment