ಕಾರವಾರ : ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿಯಿಂದ ಸವಾರಬೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಶೇಜವಾಡ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವ ಕಾರವಾರದ ಖಾಸಗಿ ಬ್ಯಾಂಕ್ ಬಂದರ ಉದ್ಯೋಗಿ ನರೇದ್ರ ಎಂದು ಹೇಳಲಾಗಿದೆ.

ಇವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಇನ್ನೋರ್ವ ಬೈಕ್ ಸವಾರ ನರೇಂದ್ರ ಅವರ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ.
ಇದರಿಂದಾಗಿ ನರೇಂದ್ರ ಅವರಿಗೆ ಗಂಭೀರವಾಗಿ ರಕ್ತಸ್ರಾವ ಉಂಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನರೇಂದ್ರ ಅತ್ಯುತ್ತಮ ಪೋಟೋಗ್ರಾಫರ್ ಸಹ ಆಗಿದ್ದು ಬಿಡುವಿನ ಸಮಯದಲ್ಲಿ ಪೋಟೋಗ್ರಾಫಿ ಜೊತೆ ಬೇರೆ ಬೇರೆ ಸಣ್ಣ ಪುಟ್ಟ ಕೆಲಸವನ್ನು ಕೂಡ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
Leave a Comment