ನವದೆಹಲಿ : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಐದು ರಾಜ್ಯಗಳಲ್ಲಿ ನಿಯಂತ್ರಣಾ ಕ್ರಮಗಳನ್ನು ಮುಂದುವರಿಸುವAತೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ದೆಹಲಿ, ಹರಿಯಾಣ, ಮಿಜೋರಾಂ, ಮಹಾರಾಷ್ಟç ಮತ್ತು ಕೇರಳ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಗಮನಾರ್ಹ ಏರಿಕೆ ಕಂಡಿವೆ. ಸೋಂಕು ಹರಡುವಿಕೆ ನಿಯಂತ್ರಣದ ಬಗ್ಗೆ ನಿಗಾವಹಿಸಬೇಕು. ಕೊರೊನಾಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೇಲ್ವಿಚಾರಣೆ ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯದ ಕರ್ಯದರ್ಶಿ ರಾಜೇಶ್ ಭೂಷಣ್ ಐದು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.
ಕೇರಳದಲ್ಲಿ ಕಳೆದ ವಾರ ಅಂದರೆ ಏಪ್ರಿಲ್ 8ರ ವರದಿ ಪ್ರಕಾರ 2321 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಹೊಸ ಪ್ರಕರಣಗಳಲ್ಲಿ ಶೇ.31 ರಷ್ಟಿದೆ. ಚೀನಾ, ಅಮೆರಿಕಾ, ಬ್ರಿಟನ್, ಯೂರೋಪ್ ದೇಶಗಳಲ್ಲಿ ಓಮೈಕ್ರಾನ್ ಹೆಚ್ಚಳವಾಗುತ್ತಿದ್ದು ಮುಂಜಾಗ್ರತೆ ವಹಿಸಬೇಕಿದೆ.
ಈ ನಡುವೆ ದೇಶದಲ್ಲಿ 1,054 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 29 ಸೋಂಕಿತರು ಮೃತಪಟ್ಟಿದ್ದಾರೆ. ಇವರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 4,30,35,271 ಕ್ಕೆರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11,123ಕ್ಕಿಳಿದಿದೆ. ರಾಷ್ಟçದಲ್ಲಿ ಒಟ್ಟು ಚೇತರಿಕೆ ದರ 98.76ರಷ್ಟಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊರೋನಾ ಬಹುರೂಪಿ ಸಾಂಕ್ರಾಮಿಕ. ಅದು ಸಂಪೂರ್ಣ ಮುಕ್ತವಾಗಿಲ್ಲ. ಮತ್ತೆಮತ್ತೆ ವಿವಿಧ ರೂಪಗಳಲ್ಲಿ ಮರುಕಳಿಸುತ್ತಿದೆ. ಸಾಂಕ್ರಾಮಿಕದ ವಿರುದ್ಧ ನಮ್ಮ ಹೋರಾಟ ಕೈಬಿಡಬಾರದು.
……ನರೇಂದ್ರ ಮೋದಿ
Leave a Comment