ಕಾರವಾರ : ತನ್ನ ತಾಯಿಯ ಅವಾಚ್ಯವಾಗಿ ಬೈದ ಕಾರಣಕ್ಕೆ ವ್ಯಕ್ತಿಯೊಬ್ಬ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕುತ್ತಿಗೆಗೆ ಗಾಯ ಮಾಡಿದ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಳಿಯಾಳದ ತೇರಗಾಂವ ಗ್ರಾಮದ ಮಲ್ಲಾ ಓಣಿಯ ನಿವಾಸಿ ಹೊನ್ನಪ್ಪ ಮಾದೇವ ಬೋವಿ (30) ಚಾಕುವಿನಿಂದ ಇರಿದ ಆರೋಪಿ.
ಅಮಾನುಲ್ಲಾ ಇರ್ಪಾನ್ ಜಮನೂರು (18) ಗಾಯಗೊಂಡ ವ್ಯಕ್ತಿ. ಈತ ಹೊನ್ನಪ್ಪನ ತಾಯಿ ಪ್ರೇಮವ್ವ ಎನ್ನುವವರಿಗೆ ಅವಾಚ್ಯವಾಗಿ ಬೈದಿದ್ದ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಅದೇ ಸಿಟ್ಟಿನಿಂದ ಹೊನ್ನಪ್ಪ ಬೋವಿ ಕುಡಿತ ಮತ್ತಿನಲ್ಲಿ ಅಮಾನುಲ್ಲಾಗೆ ಚಾಕುವಿನಿಂದ ಕುತ್ತಿಗೆಗೆ ಇರಿದು ಗಾಯ ಮಾಡಿದ್ದಾನೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಹೊನ್ನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.
ಸುಳ್ಳು ಸುದ್ದಿ ಹರಡಿದ ತಾಣದ ವಿರುದ್ಧ ಪ್ರಕರಣ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಸ್ತಾನ್ ಗೆಜೆಟ್, ಸಿಯಾಸತ್ ಹಾಗೂ ಮಕ್ತುಬ್ ಎನ್ನುವ ವೆಬ್ಸೈಟ್ಗಳಲ್ಲಿ ಹಿಂದೂ ಯುವಕ ಕಾಶ್ಮೀರ್ ಫೈಲ್ ಚಲನಚಿತ್ರ ನೋಡಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎನ್ನು ಸುಳ್ಳು ಸುದ್ದಿ ಹರಡಿದೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಕಲಂ 295 (ಎ)ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
Leave a Comment