ಕಾರವಾರ : ಪಣಜಿಯಿಂದ ಸಾಗರಕ್ಕೆ ತೆರಳುವ ಕೆಎಸ್ ಆರ್ ಟಿಸಿ ಬಸ್ನಲ್ಲಿ ಸುಮಾರು 1.20 ಲಕ್ಷ ಮೌಲ್ಯದ ಗೋವಾ ಮಧ್ಯವನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಈರ್ವರನ್ನು ಮಾಲು ಸಮೇತ ಕಾರವಾರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ರವಿ ನಾಗರಾಜ್ ಹಾಗೂ ಸಾಗರ್ ಗೋಕರ್ಣ ಬಂಧಿತರು. ಸುಮಾರು 87 ಲೀಟರ್ ಗೋವಾದ ಮಧ್ಯವನ್ನ ಲಗೇಗ್ ಬ್ಯಾಗ್ ಗಳಲ್ಲಿ ಬಚ್ಚಿಟ್ಟುಕೊಂಡು ಸಾರಿಗೆ ಬಸ್ ನಲ್ಲಿ ಇವರು ಒಯ್ಯುತ್ತಿದ್ದರು.
ಈ ವೇಳೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಾರವಾರ ತಾಲೂಕಿನ ಸದಾಶಿವಗಡ ಟೋಲ್ ನಾಕಾ ಬಳಿ ಬಸ್ ತಡೆದು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಮಧ್ಯ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಜಪ್ತಿಪಡಿಸಿಕೊಂಡ ಮಧ್ಯದಲ್ಲಿ 77 ಲೀಟರ್ ವಿಸ್ಕಿ, 3 ಲೀಟರ್ ಬ್ರಾಂಡಿ, 3 ಲೀಟರ್ ಫೆನ್ಸಿ, 3.3 ಲೀಟರ್ ವೋಡ್ಕಾ ಇತ್ತು. ಸಾರಿಗೆ ಬಸ್ನ ಚಾಲಕ – ನಿರ್ವಾಹಕರಿಗೆ ಗೋತ್ತಾಗದಂತೆ ಸಾಮಾನ್ಯ ಪ್ರಯಾಣಿಕರಂತೆ ಲಗೇಜ್ ಬ್ಯಾಗ್ ಗಳಲ್ಲಿ ಮಧ್ಯ ಸಾಗಿಸಲಾಗುತ್ತಿತ್ತು.
ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಮಾರ್ಗದರ್ಶನದಲ್ಲಿ ಕಾರವಾರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಹನುಂತ ಭಜಂತ್ರಿ, ಜಿಲ್ಲಾ ಅಬಕಾರಿ ಇನ್ಸೆಕ್ಟರ್ ದಯಾನಂದ, ಸಬ್ ಇನ್ಸೆಕ್ಟರ್ ಶಂಕರ್ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿತ್ತು.
Leave a Comment