ಕಾರವಾರ : ಜಿಲ್ಲಾ ಮೀನುಗಾರಿಕೆ ಇಲಾಖೆಯ ಕೇಂದ್ರ ಪುರಸ್ಕೃತ ಸಂಪದ ಯೋಜನೆಯಡಿ ಆಳ ದೋಣಿಗಳ ನಿರ್ಮಾಣ, ಮಂಜುಗಡ್ಡೆ ಸ್ಥಾವರಗಳ ನಿರ್ಮಾಣ ಮತ್ತು ನವೀಕರಣಕ್ಕೆ ಸಹಾಯಧನ, ಇನ್ಸುಲೆಟೆಡ್ ಟ್ರಕ್, ತ್ರಿಚಕ್ರ, ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ, ಪಂಜರ ಮೀನುಕೃಷಿ, ನೀಲಿಕಲ್ಲು ಕೃಷಿ, ಸಮುದ್ರ ಪಾಚಿ ಕೃಷಿ, ಹೀನ್ನೀರು ಮೀನು ಕೃಷಿಕೊಳಗಳ ನಿರ್ಮಾಣಕ್ಕೆ ಸಹಾಯಧನ ಒಳಗೊಂಡತೆ ಹಾಗೂ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜೂ. 6 ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಸಂಬAಧಪಟ್ಟ ತಾಲೂಕಾ ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಮೀನುಗಾರಿಕೆ ಜಂಟಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment