ರೈಲಿಗೆ ಸಿಲುಕಿ ಭಾವನಾ (18) ಎಂಬಾಕೆ ಅತ್ಮಹತ್ಯೆ ಮಾಡಿಕೊಳಂಡಿರುವ ಘಟನೆ ಮಂಡ್ಯ ನಗರದ ರೈಲು ನಿಲ್ದಾಣ ಸಮೀಪದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹಿಂಭಾಗದ ರೈಲ್ವೆ ಹಳಿ ಬಳಿ ಬುಧವಾರ ನಡೆದಿದೆ.
ರೈಲಿಗೆ ಸಿಲುಕಿದ ಸಂದರ್ಭ ಭಾವನಾಳ ಕಾಲು ತುಂಡಾಗಿದ್ದು, ಆಕೆ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾಳೆ. ಬೆಂಗಳೂರು ಯಲಹಂಕದ ಕೃಷ್ಣಮೂರ್ತಿ ಹಾಗೂ ಮಂಜುಳಾ ದಂಪತಿ ಪುತ್ರಿ ಭಾವನಾ ಖಿನ್ನತೆಗೆ ಒಳಗಾಗಿ ಈ ದುರಂತ ಸಾವಿಗೀಡಾಗಿದ್ದಾಳೆ ಎಂದು ಹೇಳಲಾಗಿದೆ. ಹೆಚ್ಚು ಮೊಬೈಲ್ ವ್ಯಸನಿಯಾಗಿದ್ದ ಭಾವನಾಳಿಗೆ ಪೋಷಕರು ಬುದ್ಧಿಮಾತು ಹೇಳಿ ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಆಕೆಯಿಂದ ಮೊಬೈಲ್ ಪಡೆದುಕೊಂಡಿದ್ದರು.
ಇದರಿಂದ ಬೇಸತ್ತ ಅಕೆ ಖಿನ್ನತೆಗೆ ಒಳಗಾಗಿ ಮಂಡ್ಯಕ್ಕೆ ಬಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Leave a Comment