ಹೊನ್ನಾವರ : ತಾಲೂಕಿನ ಕಡತೋಕಾ ಕ್ರಾಸ್ ಹತ್ತಿರ ಕಾರು ಮತ್ತು ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭಿರ ಗಾಯಗೊಂಡು, ಹಿಂಬದಿ ಸವಾರಳು ಮೃತಪಟ್ಟ ಘಟನೆ ನಡೆದಿದೆ.
ಕಾರು ಚಾಲಕ ಪಟ್ಟಣದ ಪ್ರಭಾತನಗರ ನಿವಾಸಿ ಶ್ರೀಪಾದ ಭಟ್ ವಿರುದ್ಧ ದೂರು ದಾಖಲಾಗಿದೆ. ಚಂದಾವರ ಹೊನ್ನಾವರ ರಸ್ತೆಯ ಕಡತೋಕಾ ಕ್ರಾಸ್ ಹತ್ತಿರ ತನ್ನ ಕಾರನ್ನು ಚಂದಾವರ ಮಾರ್ಗದಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಚಂದಾವರ ಕಡೆಯಿಂದ ಹೊನ್ನಾವರ ಕಡೆಗೆ ತನ್ನ ಎದುರಿನಿಂದ ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿಪಡಿಸಿದ್ದಾನೆ.
ಬೈಕ್ ಸವಾರ ಮಾಸ್ತಿ ನಾಯ್ಕ ಅವರಿಗೆ ಎರಡು ಕೈಗಳಿಗೆ ಗಾಯನೋವು ಪಡಿಸಿದ್ದಲ್ಲದೇ, ಹಿಂಬದಿ ಸವಾರಳಾದ ಪದ್ಮಾವತಿ ನಾಯ್ಕ ಇವರಿಗೆ ತಲೆಗೆ ಗಂಭೀರ ಗಾಯನೋವು ಉಂಟಾಗಿತ್ತು. ಕುಮಟಾ ತಾಲ್ಲೂಕಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡಪಿಯ ಆದರ್ಶ ಆಸ್ಪತ್ರೆಯಲ್ಲಿ ದಾಖಲುಪಡಿಸಿದ್ದರು. ಗಾಯಾಳು ಉಡಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿದ್ದವಳು ಶುಕ್ರವಾರದಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಗಾಯಗೊಂಡ ಮಾಸ್ತಿ ನಾಯ್ಕ ಹಾಗೂ ಮೃತಪಟ್ಟ ಪದ್ಮಾವತಿ ನಾಯ್ಕ ಇಲ್ಲಿನ ಯಲ್ಲಾಪುರದ ನಿವಾಸಿಗಳಾಗಿದ್ದಾರೆ.
Leave a Comment