ಮುಂಡಗೊಡ : ಯಲ್ಲಾಪುರದಿಂದ ಮುಂಡಗೋಡದ ಕಡೆಗೆ ಬರುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ಸಿನ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಮಲ್ಲಪ್ಪ ಸೋಮಪ್ಪನವರ (45)ಮೃತಪಟ್ಟ ಚಾಲಕ ಯಲ್ಲಾಪುರದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಬಸ್ ತಾಲೂಕಿನ ಮೈನಳ್ಳಿ ಹತ್ತಿರ ಬರುತ್ತಿರುವಾಗ ಬಸ್ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೆ ಬಸ್ ನ ವೇಗ ಕಡಿಮೆ ಮಾಡಿ ಬಸ್ ನಿಲ್ಲಿಸಿ ಪ್ರಾಣ ಬಿಟ್ಟಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.
Leave a Comment