ಕಾರವಾರ : ತಾಲೂಕಿನ ಬಾರಗದ್ದೆಯಲ್ಲಿ ವಿದ್ಯುತ್ ಕಂಬದ ಅರ್ಥಿಂಗ್ ನಲ್ಲಿ ವಿದ್ಯತ್ ಹರಿದು ರೈತನೊಬ್ಬ ಶಾಕ್ ನಿಂದ ಮೃತಪಟ್ಟ ಘಟನೆ ನಡೆದಿದೆ.
ರೈತ ತಾಂಬ್ರು ಗೋವಿಂದ ಬಡ್ಡೆಗಾರ ಮೃತರಾಗಿದ್ದು, ಹೊಲದ ಕೆಲಸ ಮಾಡಿಕೊಂಡು ವಾಪಸ್ ಬರುವಾಗ ಘಟನೆ ನಡೆದಿದೆ.
ವಿದ್ಯತ್ ಕಂಬದ ಅರ್ಥಿಂಗ್ ತಂತಿಯ ಮೂಲಕ ವಿದ್ಯುತ್ ನೆಲಕ್ಕೆ ಹರಿದಿತ್ತು. ಮಳೆಯಾಗಿದ್ದರಿಂದ ತಾಂಬ್ರು ಅವರಿಗೆ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment