• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿ ಗ್ರಾಹಕರ ಬರ :ಬಾಡಿಗೆಯ ಹೊರೆ

June 13, 2022 by Jayaraj Govi Leave a Comment

IMG 20220610 WA0027

ಯಲ್ಲಾಪುರ : ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್‌ನ ಬಾಡಿಗೆ ಅತಿಯಾಗಿದ್ದು, ನಿರ್ವಹಣೆಗೆ ಹೊರೆಯಾಗುತ್ತಿದೆ ಎಂದು ಮಾಲಿಕರಾದ ಮೇಘಾ ಅಳಲು ತೋಡಿಕೊಂಡಿದ್ದಾರೆ.
ನಿಲ್ದಾಣದ ಕ್ಯಾಂಟಿನನಲ್ಲಿ    ಗ್ರಾಹಕರು ವ್ಯವಹರಿಸುವದು ಕಡಿಮೆಯಾಗಿರುವದಕ್ಕೆ  ಕಾರಣ  ಬಸ ನಿಲ್ದಾಣದಲ್ಲಿಯೇ ಪ್ರಯಾಣಿಕರ ಉಪಹಾರ ಊಟ ಕ್ಕಾಗಿ   ಬಸ್ ಗಳನ್ನು ನಿಲ್ಲಿಸದಿರುವದೇ ಆಗಿದೆ.

ಇದರಿಂದ ಗ್ರಾಹಕರು  ಕಡಿಮೆಯಿದ್ದು   ಕಟ್ಟಡ ಬಾಡಿಗೆ ಹಾಗೂ ಠೇವಣಿ ಹೆಚ್ಚಾಗಿರುವುದರಿಂದ ಕ್ಯಾಂಟೀನ್ ನಿರ್ವಹಣೆ ಕಷ್ಟವಾಗಿದೆ. ಬಸ್ ಸ್ಟ್ಯಾಂಡ್ ಕ್ಯಾಂಟೀನ್‌ನಲ್ಲಿ ಹೆಚ್ಚಾಗಿ ದೂರದ ಊರುಗಳಿಗೆ ತೆರಳುವ ಬಸ್‌ಗಳು ತಂಗಿದಾಗ ಮಾತ್ರ ಪ್ರಯಾಣಿಕರು ವ್ಯವಹಾರ ಮಾಡುತ್ತಾರೆ.

ಅದರೆ ಯಲ್ಲಾಪುರಕ್ಕೆ ಅಂತಹ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಬಹುತೇಕ ಬಸ್‌ಗಳು ಅಂಕೋಲಾ ಯಲ್ಲಾಪುರ ಹೆದ್ದಾರಿ ಪಕ್ಕದ ಹೋಟೆಲ್‌ಗಳಲ್ಲಿ ಊಟಕ್ಕೆ ನಿಲ್ಲಿಸುತ್ತಾರೆ. ಇದರಿಂದಾಗಿ ಸಹಜವಾಗಿಯೇ ಗ್ರಾಹಕರ ಸಂಖ್ಯೆ ಕಡಿಮೆಯಿದೆ. ಆದರೆ ಕಟ್ಟಡ ಬಾಡಿಗೆಯಾಗಿ ಪ್ರತಿ ತಿಂಗಳು ( ವಿದ್ಯುತ್,ಜಿ ಎಸ್.ಟಿ  ಸೇರಿ) ೧.೫ ಲಕ್ಷ ಭರಣ ಮಾಡುತ್ತಿದ್ದೇವೆ. ಗಳಿಕೆಗಿಂತ ಹೆಚ್ಚಿನ ಹಣ ಬಾಡಿಗೆಯಲ್ಲಿ ಹೋಗುತ್ತಿದೆ.


ಹೋಟೆಲ್ ಮಾಲಿಕರಾದ ಮೇಘಾ ಮಾತನಾಡಿ, ನನ್ನ ಯಜಮಾನರು  ೮ ಲಕ್ಷಕ್ಕೆ ಟೆಂಡರ್ ಪಡೆದಿದ್ದರು. ಅವರ ಆಕಸ್ಮಿಕ ಮರಣಾ ನಂತರ ಹೋಟೆಲ್ ನ ನಿರ್ವಹಣೆ ನಾನೇ ಮಾಡುತ್ತಿದ್ದೇನೆ. ಶುಚಿರುಚಿ ಗೆ ಆದ್ಯತೆ ನೀಡುತ್ತಿದ್ದರೂ  ಗ್ರಾಹಕರಿಗೆ ತಲುಪದಂತಾಗಿ ಆರ್ಥಿಕವಾಗಿ ನಷ್ಟ ಎದುರಿಸುವಂತಾಗಿದೆ.    ಇನ್ನು ಬಸ್ ಗಳನ್ನು ನಿಲ್ಲಿಸುವಂತೆ ಚಾಲಕರು ಹಾಗೂ ನಿರ್ವಾಹಕರನ್ನು ಕೋರಿದ್ದಲ್ಲಿ, ತಮಗೆ ಉಚಿತ ಊಟ ದೊರೆಯವಲ್ಲಿ ನಿಲ್ಲಿಸುತ್ತೇವೆ ಎಂಬ ಉತ್ತರವನ್ನು ನೀಡಿರುತ್ತಾರೆ.

ನಾವು ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಹಾಗೂ ಚಾಲಕ-ನಿರ್ವಾಹಕರಿಗೆ ಅರ್ಧ ಬೆಲೆಯಲ್ಲಿ ನೀಡಲಾಗುತ್ತಿದ್ದರೂ, ಬಸ್‌ಗಳನ್ನು ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು. ಅಧಿಕ ಬಾಡಿಗೆಯ ಕುರಿತು ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ್ದÃವೆ ೧೫ ದಿನಗಳ ಹಿಂದೆ ತಪಾಸಣೆಗಳಾಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದು, ಹೆಚ್ಚಿನ ಬಸ್ ನಿಲುಗಡೆಯ ಕುರಿತು ಚರ್ಚಿಸುವುದಾಗಿ ತಿಳಿಸಿದ್ದರು. ಈ ವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದರು.


ಈ ಕುರಿತು ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿಎಸ್ ಪಾಟೀಲ ಅವರನ್ನು ಸಂಪರ್ಕಿಸಿದಾಗ ,ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಕೆ ಎಸ್ ಆರ್ ಟಿಸಿ ವಿಭಾಗೀಯ ಕಚೇರಿಗಳಲ್ಲಿ ಪರವಾಣಿಗೆಯನ್ನು ಪಡೆದುಕೊಂಡಿರುವ  ಹೋಟೇಲ್‌ಗಳ ಮುಂದೆ ಮಾತ್ರ ಬಸ್ ನಿಲ್ಲಿಸುವ ಕ್ರಮವಿದೆ.ಅದು ರಾತ್ರಿ ವೇಳೆ ಸಂಚರಿಸುವ ಬಸ್ ಗಳ ಪ್ರಯಾಣಿಕರ ಊಟಕ್ಕಾಗಿ  ಮಾತ್ರ ನಿಲ್ಲಿಸಬಹುದಾಗಿದ್ದರೂ ಸಿಬ್ಬಂದಿಗಳು ತಮಗೆ ಬೇಕಾದ ಹೋಟೆಲ್ ಬಳಿ  ನಿಲ್ಲಿಸುವಂತಿಲ್ಲ ಎಂದರಲ್ಲದೇ  ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಕ್ಯಾಂಟಿನ ನಡೆಸುವ ಮಹಿಳೆಯ ಅಳಲಿಗೆ ಸ್ಪಂದಿಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.


ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಕೆ ಎಸ್ ಆರ್ ಟಿಸಿ ವಿಭಾಗೀಯ ಕಚೇರಿಗಳಲ್ಲಿ ಪರವಾಣಿಗೆಯನ್ನು ಪಡೆದುಕೊಂಡಿರುವ  ಹೋಟೇಲ್‌ಗಳ ಮುಂದೆ ಮಾತ್ರ ನಿಲ್ಲಿಸುವ ಕ್ರಮವಿದೆ.ಅದು ರಾತ್ರಿ ವೇಳೆ ಸಂಚರಿಸುವ ಬಸ್ ಗಳಿಗೆ ಮಾತ್ರವೇ ಹೊರತು ಸಿಬ್ಬಂದಿಗಳು ತಮಗೆ ಬೇಕಾದ ಹೋಟೆಲ್ ಬಳಿ  ನಿಲ್ಲಿಸುವಂತಿಲ್ಲ. ಆ ಹೆಣ್ಣು ಮಗಳಿಗೆ ಕ್ಯಾಂಟಿನ ನಡೆಸಲು  ಕೆ ಎಸ್ ಆರ್‌ಟಿಸಿಯಿಂದ ಸಾಧ್ಯವಾದ ಸಹಕಾರ ನೆರವು  ನೀಡುತ್ತೇವೆ.

— ವಿ .ಎಸ್. ಪಾಟೀಲ ವಾಕರಸಾನಿ ಅಧ್ಯಕ್ಷ

ರೈಲ್ವೆ ನೇಮಕಾತಿ ಅಧಿಸೂಚನೆ 2022

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...