ಶಿರಸಿ : ಜಿಲ್ಲಾ ಶಿಕ್ಷಕ -ಶಿಕ್ಷಕಿಯರ ನಿರಂತರ ಸಹಾಯವಾಣಿಯ ವತಿಯಿಂದ 2021 – 22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಜಿಲ್ಲೆಯ ಆಟೋ ಚಾಲಕರ ಹಾಗೂ ಮಾಲಕರ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕಿನ ಆಟೋ ಚಾಲಕ – ಮಾಲಕರ ಆಸಕ್ತ ಅಕ್ಕಳು ಅರ್ಜಿಗಳನ್ನು ಜೂ. 25 ರ ಒಳಗಾಗಿ ಆಯಾ ತಾಲೂಕಿನ ಅಥವಾ ಜಿಲ್ಲಾ ಆಟೋ ಸಂಘದ ಮೂಲಕ ಸಂಸ್ಥೆಯ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿಸಿಕೊAಡಿದ್ದಾರೆ.
ಪ್ರತಿಭಾ ಪುರಸ್ಕಾರವು ಸನ್ಮಾನ ಹಾಗೂ ನಗದು ಹಣವನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳ ಕೈ ಬರಹದ ಅರ್ಜಿಯ ಜೊತೆಗೆ ದೃಡೀಕರಿಸಿದ ಅಂಕಪಟ್ಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಶನ್ ಕಾರ್ಡ್ ಮತ್ತು ಪಾಲಕರ ಡ್ರೆöÊವಿಂಗ್ ಲೈಸೆನ್ಸ್ ಪ್ರತಿಗಳನ್ನು ಕಳುಹಿಸಿಕೊಡತಕ್ಕದ್ದು,
ಅರ್ಜಿಗಳನ್ನು ವಿಶ್ವನಾಥ ಎಸ್. ಗೌಡ ಅಧ್ಯಕ್ಷರು. ಜಿಲ್ಲಾ ಶಿಕ್ಷಕ ಶಿಕ್ಷಕಿಯರ ನಿರಂತರ ಸಹಾಯವಾಣಿ ರಿ.., ಮುರೇಸರ, ಚಿಪಗಿ, ತಾ : ಶಿರಸಿ (ಉತ್ತರ ಕನ್ನಡ) – 581 402 ಮೊ.ಸಂ : 98801 79177 ಗೆ ಕಳುಹಿಸಿ ಕೊಡಬೇಕಿದೆ.
Leave a Comment