ಶಿರಸಿ : ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜ್ಯೋನ್ನತಿ ಸಂಘದ ಜಿಲ್ಲಾ ವಾರ್ಷಿಕ ಸಮ್ಮೇಳನ ಜು. 10 ರಂದು ಕಾರವಾರ ಕೋಡಿಭಾಗದ ಭಂಡಾರಿ ಸಮಾಜ ಮಂದಿರದಲ್ಲಿ ನಡೆಯಲ್ಲಿದ್ದು ಅದರ ಪ್ರಯುಕ್ತ 2020-21 ಮತ್ತು 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಂಡಾರಿ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ.
ಇದಕ್ಕೆ ಸಂಬAಧಿಸಿದAತೆ ಶೇ. 80 ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ನಕಲು ಪ್ರತಿಯನ್ನು ದೃಢೀಕರಿಸಿ ಪ್ರಕಾಶ ಕೃಷ್ಣ ದೇಶಭಂಡಾರಿ, ಚಿಪ್ಪಿಹಕ್ಕಲ್, ಪೋ ನವೀಲಗೋಣ, ತಾಲೂಕ ಹೊನ್ನಾವರ ಈ ವಿಳಾಸಕ್ಕೆ ಜೂನ್ 30 ರೊಳಗೆ ಕಳುಹಿಸಿಕೊಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೆ ದೇಶಭಂಡಾರಿ (ಮೊಬೈಲ್ ಸಂಖ್ಯೆ 9482357982), ಅಥವಾ ನಾಗರಾಜ ನಾಯಕ ಶಿರಸಿ (9986555976) ಇವರನ್ನು ಸಂಪರ್ಕಿಸಬಹುದಾಗಿದೆ.
Leave a Comment