ನಿಗದಿತ ಸಮಯದೊಳಗೆ ನರೇಗಾದಡಿಯ ಕೆರೆ ಕಾಮಗಾರಿ, ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಸಿಇಒ ಸೂಚನೆ
ಕಾರವಾರ:- ಗ್ರಾಮೀಣ ಜನರ ಸಮಗ್ರ ಅಭಿವೃದ್ಧಿ, ಮಣ್ಣು, ಜಲ ಸಂರಕ್ಷಣೆ, ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ನರೇಗಾದಡಿ ಕೈಗೊಂಡಿರುವ ಕೆರೆ ಕಾಮಗಾರಿಗಳನ್ನು ಹಾಗೂ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಹಿನ್ನಲೆಯಲ್ಲಿ ಪ್ರಗತಿಯಲ್ಲಿರುವ ಜೆಜೆಎಂ ಯೋಜನೆ ಕಾಮಗಾರಿಯನ್ನು ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ನಿಗದಿತ ಸಮಯದೊಳಗೆ ಅಚ್ಚುಕಟ್ಟಾಗಿ ಪೂರ್ಣಗೊಳಿಸಬೇಕು ಎಂದು ತಾಪಂ ಇಒ, ಎಡಿ, ಆರ್ಡಬ್ಲ್ಯೂಎಸ್ನ ಎಇಇ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಇಂಜನಿಯರ್ಗಳಿಗೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ ಅವರು ಸೂಚನೆ ನೀಡಿದರು.
ಜಿಲ್ಲೆಯ ಸಿದ್ಧಾಪುರ ತಾಲೂಕಿನ ಮಾವಿನಗುಂಡಿ, ಮನಮನೆ, ಕಂವಚೂರ, ಹಲಗೇರಿ, ಬಿಳಗಿ, ಸೋವಿನಕೊಪ್ಪ ಗ್ರಾಮ ಪಂಚಾಯತಿಗಳಿಗೆ ಸೋಮವಾರ ಭೇಟಿ ನೀಡಿದ ಅವರು ನರೇಗಾದಡಿ ಕೈಗೊಂಡ ಕೆರೆ ಹೂಳೆತ್ತುವ ಕಾಮಗಾರಿ, ಶಾಲಾ ಕಾಂಪೌಂಡ್ ಮತ್ತು ಆಟದ ಮೈದಾನ ನಿರ್ಮಾಣ ಕಾಮಗಾರಿ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಎನ್ಎಂಎಂಎಸ್ ಅಪ್ಲಿಕೇಶನ್ ಬಳಕೆ, ತೋಟಗಾರಿಕೆ ಇಲಾಖೆಯ ಸಹಾಯ ಧನದಡಿ ಕಾರ್ಯನಿರ್ವಹಿಸುತ್ತಿರುವ ಅನಾನಸ್-ಕೋಕಂ ಜ್ಯೂಸ್ ತಯಾರಿಕಾ ವಿಧಾನ, ಜೆಜೆಎಂ ಅಡಿಯಲ್ಲಿ ಕೈಗೊಂಡ ಮನೆ ಮನೆಗೆ ನಳ ಸಂಪರ್ಕ, ಮೀಟರ್ ಅಳವಡಿಕೆ, ಸಿಬ್ಬಂದಿ ವೇತನ, ಪಂಚತಂತ್ರ-2 ತಂತ್ರಾಂಶ ಬಳಕೆ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
ಮಳೆಗಾಲ ಸಮೀಪಿಸುತ್ತಿದ್ದು, ಈಗಾಗಲೇ ನರೇಗಾದಡಿ ಕೈಗೊಂಡಿರುವ ಹೊಸ ಕೆರೆ ನಿರ್ಮಾಣ, ಕೆರೆ ಹೂಳೆತ್ತುವ ಕಾಮಗಾರಿಗಳನ್ನು ಸಮ ಪ್ರಮಾಣದಲ್ಲಿ ಮಣ್ಣನ್ನು ತೆಗೆದು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಇದರಿಂದ ಕೆರೆಯಲ್ಲಿ ಹೆಚ್ಚಿನ ನೀರು ನಿಲ್ಲಲು ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟವು ಹೆಚ್ಚುತ್ತದೆ. ಹಾಗೇ ಮಕ್ಕಳಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಶಾಲಾ ಆಟದ ಮೈದಾನ, ಕಾಂಪೌಂಡ್, ಶೌಚಾಲಯದಂತ ಕಾಮಗಾರಿಗಳನ್ನ ಕೈಗೊಳ್ಳಬೇಕು ಎಂದರು.
ನಂತರ ಜೆಜೆಎಂ ಕಾಮಗಾರಿ ವೀಕ್ಷಿದ ಅವರು, ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸುವ ಈ ಯೋಜನೆಯಡಿ ಕೇವಲ ನಳದ ಸಂಪರ್ಕ ಕಲ್ಪುಸುವ ಕೆಲಸವಾಗುತ್ತಿದೆ. ಅದರ ಬದಲಿಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಪರ್ಕ ಕಲ್ಪಿಸುವ ನಳಕ್ಕೆ ನೀರು ತುಂಬಲು ಅನುಕೂಲವಾಗುವಂತೆ ಟ್ಯಾಪ್ ಅಳವಡಿಸಿ ನಳ, ಮೀಟರ್ ಹಾಗೂ ಟ್ಯಾಪ್ ಮೇಲೆ ಯೋಜನೆ ಹೆಸರು, ಅನುಷ್ಠಾನ ವರ್ಷ, ಟ್ಯಾಪ್ ನಂಬರ್ ಬರೆಯಬೇಕು ಎಂದು ಆರ್ಡಬ್ಲ್ಯೂಎಸ್ನ ಅಧಿಕಾರಿಗಳಿಗೆ ತಿಳಿಸಿದರು.
ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಅವರು, ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಮ ಪಂಚಾಯತಿಗಳು ಸರಿಯಾಗಿ ಕಸ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಿದ್ಧಾಪುರ ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ವಿ. ರಾವ್, ನರೇಗಾ ಸಹಾಯಕ ನಿರ್ದೇಶಕ ದಿನೇಶ್ ಡಿ.ಈ., ಮ್ಯಾನೇಜರ್ ನಾಗರಾಜ ಜೋಕನಾಳ, ತೋಟಗಾರಿಕೆ ಇಲಾಖೆಯ ಡಿಡಿ ಸತೀಶ್, ಆರ್ಡಬ್ಲ್ಯೂಎಸ್ನ ಎಇಇ ಕುಸುಮಾ ಹೆಗಡೆ, ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿಗಳು, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Leave a Comment