ಧಾರವಾಡ : ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಶುಕ್ರವಾರ ನಡೆದ ರಾಷ್ಟಿçÃಯ ಲೋಕ ಅದಾಲತ್ ನಲ್ಲಿ ರೈತರೊಬ್ಬರಿಗೆ ಕಳಪೆ ಬಾಳೆ ಸಸಿ ಪೂರೈಸಿದ್ದ ಆಗ್ರೋ ಕೇಂದ್ರವು 4 ಲಕ್ಷ ರೂ. ಪರಿಹಾರ ನೀಡುವ ಆದೇಶವೂ ಸೇರಿದಂತೆ, ಸುಮಾರು 50 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಕೈಗೆತ್ತಿಕೊಳ್ಳಲಾಯಿತು.
ಅವುಗಳಲ್ಲಿ 17 ಪ್ರಕರಣಗಳು ರಾಜಿಯಾಗಿ ಒಟ್ಟು ಸುಮಾರು 45 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಯಿತು. 2012-13 ನೇ ಸಾಲಿನ ಸರ್ಕಾರದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ ಬಾಳೆಯ ಬೆಳೆಗಾರರಾಗಿ ಆಯ್ಕೆಯಾಗಿದ್ದ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ರೈತರೊಬ್ಬರಿಗೆ ಕಳಪೆ ಬಾಳೆ ಸಸಿಗಳನ್ನು ಸರಬರಾಜು ಮಾಡಿದ ಆಗ್ರೋ ಕೇಂದ್ರದವರು ಸೇವಾ ನ್ಯೂನತೆಗಾಗಿ ಪರಿಹಾರ ಕೊಡಬೇಕು ಎಂಬ ಬೇಡಿಕೆಯೊಂದಿಗೆ 2014 ರಲ್ಲಿ ರೈತ ದಾಖಲಿಸಿದ ಸುಮಾರು 8 ವರ್ಷದ ಹಳೆಯ ಪ್ರಕರಣವನ್ನು ಅದಾಲತ್ ಮೂಲಕ ರಾಜಿ ಮಾಡಿಸಿ ರೈತನಿಗೆ 4 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಯಿತು.
ಲೋಕ ಅದಾಲತ್ ನಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ನ್ಯಾಯವಾದಿ ಎಮ್,ಎಸ್, ಹೆಗಡೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದರು.
Leave a Comment