ಹೊನ್ನಾವರ : ತಾಲೂಕಿನ ನಗರಬಸ್ತಿಕೇರಿಯ ದೇವಿಗದ್ದ ನಿವಾಸಿ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಸಂತೋಷ ಮಂಜುನಾಥ ನಾಯ್ಕ(18) ಅತಹತ್ಯೆ ಮಾಡಿಕೊಂಡ ಯುವಕ ಈತ ಜೂ.24ರಂದು ಬಾಡಿಗೆಗೆ ಹೊನ್ನಾವರಕ್ಕೆ ತೆರಳಿದ್ದ.
ಈ ವೇಳೆ ಯಾವುದೋ ವಿಷಯದಲ್ಲಿ ಸಂತೋಷ್ನೊAದಿಗೆ ದ್ವೇಷದಿಂದಿದ್ದ ಅವನ ಪರಿಚಯಸ್ಥರಾಗಿರುವ ಆರೋಪಿತರಾದ ನಗರಬಸ್ತಿಕೇರಿ ಗಾಳಗೂರ ನಿವಾಸಿಗಳಾದ ದೀಪಕ ಈಶ್ವರ ನಾಯ್ಕ, ಪವನ ಶಂಕರ ನಾಯ್ಕ, ಸಂತೋಷ ಈಶ್ವರ ನಾಯ್ಕ ಫೋನ್ ಮಾಡಿ ನಿನ್ನ ಹತ್ತಿರ ಮಾತನಾಡುವದಿದೆ ಎಂದು ಸಂಜೆ 4ಗಂಟೆ ವೇಳೆಗೆ ಹೊನ್ನಾವರದ ಕಾಸರಕೋಡಕ್ಕೆ ಕರೆಸಿದ್ದಾರೆ.
ಸಂತೋಷನನ್ನು ಉದ್ದೇಶಿಸಿ ಅವಾಚ್ಯವಾಗಿ ನಿಂದಿಸಿ,ನೀನು ಸಾಯಲೇಬೇಕು, ಇಲ್ಲದಿದ್ದರೆ ನಿನ್ನ ಮಾನ ಕಳೆಯುತ್ತವೆ,ನಿನ್ನನ್ನು ಮರ್ಯಾದೆಯಿಂದ ಬದುಕಲು ಬಿಡುವುದಿಲ್ಲ ಎಂದು ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಂತೋಷನಿಗೆ ಸಾಯಲು ಪ್ರೇರಣೆ ನೀಡಿದ್ದರಿಂದ ಅದೇ ದಿನ ರಾತ್ರಿ ಇಲ್ಲಿಗೆ ಹಾಕುವ ಮದ್ದು ಸೇವಿಸಿದ್ದಾನೆ. ಈ ವಿಷಯ ಗೊತ್ತಾಗಿ ಆತನಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜೂ.27ರಂದು ಚಿಕಿತ್ಸೆ ಪಡೆದು ಮನೆಗೆ ಬಂದಾಗಲೂ ಸಹ ಅದೇ ದಿನ ಸಂಜೆ ಆರೋಪಿತರು ಬೆದರಿಸಿದ್ದಾರೆ ಎನ್ನಲಾಗಿದೆ.
ಜೂ.30ರಂದು ಆರೋಗ್ಯ ಮತ್ತೆ ಕೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾನೆ. ತನ್ನ ತಮ್ಮನ ಸಾವಿಗೆ ದುಷ್ಕರಣೆ ನೀಡಿದವರ ಮೇಲೆ ಕ್ರಮ ಜರುಗಿಸಬೇಕೆಂದು ಶಂಕರ ಗಣಪತಿ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment