ಹೊನ್ನಾವರ : ಸರ್ಕಾರದ ಆದೇಶದನ್ವಯ ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಅಂಗಡಿಗಳಿಗೆ, ಪಪಂ ಕಚೇರಿಯ ಸಿಬ್ಬಂದಿಗಳು ದಿಢೀರನೇ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಪ.ಪಂ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾಯಕ್ ನಿರ್ದೇಶನದಂತೆ ಪಟ್ಟಣದ ಪಟ್ಟಣದ ಹೂ-ಹಣ್ಣಿನ ಅಂಗಡಿ, ಬೇಕರಿ ಬಟ್ಟೆ ಅಂಗಡಿ ಸೇರಿದಂತೆ ವಿವಿಧೆಡೆ ಒಟ್ಟೂ 7 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡು 300 ರೂಪಾಯಿ ದಂಡ ವಿಧಿಸಿದ್ದಾರೆ.
ಇನ್ನು ಮುಂದೆ ನಿಷೇಧಿತ ಪ್ಲಾಸಿಕ್ ಬಳಸದಂತೆ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ವೆಂಕಟೇಶ ನಾಯ್ಕ, ಅಂದಪ್ಪ ಹಂಚಿನಾಳ, ವಿನಾಯಕ, ಸಣ್ಣು ಗೊಂಡ, ಶಕುಂತಲಾ ನಾಯ್ಕ, ಯೋಗೇಶ, ಕಿರಣ ಹಾಜರಿದ್ದರು, ಸಣ್ಣಪುಟ್ಟ ಅಂಗಡಿಗಳ ಮೇಲೆ ದಾಳಿ ಮಾಡುವುದರ ಜೊತೆಗೆ ಪ್ಲಾಸ್ಟಿಕ್ ಕವರ್ ತಯಾರಿಸುವಲ್ಲಿಯೇ ಅಧಿಕಾರಿಗಳು ದಾಳಿ ಮಾಡಿ ಎಂಬ ಅಭಿಪ್ರಾಯವು ಸಾರ್ವಜನಿಕರಿಂದ ಕೇಳಿ ಬಂತು.
Leave a Comment