ಹೊನ್ನಾವರ ತನ್ನ ಪತ್ನಿಯ ಮೇಲೆ ಸಂಶಯಗೊAಡು ಅವಾಚ್ಯ ಶಬ್ಧದಿಂದ ನಿಂದಿಸಿ, ಮಾರಾಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಡತೋಕಾದಲ್ಲಿ ಸಂಭವಿಸಿದೆ.
ಕಡತೋಕಾದ ಮಂಜುನಾಥ ಶೆಟ್ಟಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಆಶಾ ಶೆಟ್ಟಿ (50) ಪತಿಯಿಂದ ಹಲ್ಲೆಗೊಳಗಾದ ಮಹಿಳೆಯಾಗಿದ್ದಾಳೆ.
ಈ ಹಿಂದಿನಿAದಲೂ ಪತ್ನಿಯ ಮೇಲೆ ಸಂಶಯದಿAದ ವಿನಾಕಾರಣ ಕಿರುಕುಳ ನೀಡುತ್ತಿದ್ದ ಈತನಿಗೆ ಈ ಹಿಂದೆ ಯೇ ಅಣ್ಣತಮ್ಮಂದಿರು ಅನೇಕ ಬಾರಿ ಬುದ್ಧಿವಾದ ಹೇಳಿದ್ದರು. ಆದರೆ ಶುಕ್ರವಾರ ತಡರಾತ್ರಿ ಕೈಯಲ್ಲಿ ಚಾಕು ಹಿಡಿದು ಅವಾಚ್ಯ ಶಬ್ಧಳಿಂದ ನಿಂದಿಸಿ, ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎನ್ನುತ್ತಿರುವಾಗ ಕುಟುಂಬದವರು ಮನೆಯ ಬಾಗಿಲು ತೆರೆದು ಪ್ರಶ್ನಿಸುವಾಗ ಬಳಿಬಂದು ಪತ್ನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡತೋಕಾದ ನರಸಿಂಹ ಶೆಟ್ಟಿ ಕಾನೂನು ಕ್ರಮ ಕೈಗೊಳ್ಳುವಂತೆ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಂಜುನಾಥ ಶೆಟ್ಟಿಯನ್ನು ಬಂಧಿಸಿದ್ದಾರೆ.
Leave a Comment