• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಹಿರಿಯ ನಟಿ ಲಕ್ಷ್ಮೀ ಪುತ್ರಿ ಬದುಕು ದುರ್ಭರ ಸಾಬೂನು ಮಾರಾಟಕ್ಕೆ ಇಳಿದ ನಟಿ

July 8, 2022 by Deepika Leave a Comment

ಚೆನ್ನೈ: ಕೆಲ ವರ್ಷಗಳ ಹಿಂದೆ ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಸಕ್ರಿಯವಾಗಿದ್ದ ಮಲಯಾಳಂ ನಟಿ ಮತ್ತು ಕನ್ನಡದ ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ ಐಶ್ವರ್ಯಾ ಇಂದು ಅವಕಾಶಗಳಿಲ್ಲದೆ ಜೀವನೋ ಪಾಯಕ್ಕಾಗಿ ಬೀದಿಬೀದಿಗಳಲ್ಲಿ ಸಾಬೂನು ಮಾರುವ ಸ್ಥಿತಿಗೆ ಇಳಿದಿದ್ದಾರೆ.

ಹಿಂದೊಮ್ಮೆ ಸೂಪರ್ ಸ್ಟಾರ್‌ಗಳಾದ ರಜನೀಕಾಂತ್‌ ಮತ್ತು ಮೋಹನಲಾಲ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಐಶ್ವರ್ಯಾ ಇತ್ತೀಚಿನವರೆಗೂ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಸೀಮಿತಗೊಂಡಿದ್ದರು. ಆದರೆ ಈಗ ಕೈಯಲ್ಲಿ ಯಾವ ಪಾತ್ರಗಳಿಲ್ಲದೆ ಬದುಕು ಸಾಗಿಸಲು ಬೇರೆ ಆದಾಯವಿಲ್ಲದೆ ಬೀದಿ ವ್ಯಾಪಾರಕ್ಕೆ ಇಳಿದಿರುವುದಾಗಿ ಸ್ವತಃ ಐಶ್ವರ್ಯಾ ಭಾಸ್ಕರನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ದಯನೀಯ ಪರಿಸ್ಥಿತಿಯನ್ನು ತೆರೆದಿಟ್ಟಿರುವ ಈ ನಟಿ, ಸದ್ಯಕ್ಕೆ ಅಭಿನಯಿಸಲು ಯಾವುದೇ ಚಿತ್ರಗಳಿಲ್ಲ. ಉದ್ಯೋಗ ಇಲ್ಲ . ಜೊತೆಗೆ ಹಣವೂ ಇಲ್ಲ. ಹೀಗಾಗಿ ವಿಧಿಯಿಲ್ಲದೆ ಸಾಬೂನು ಮಾರಾಟದಲ್ಲಿ ತೊಡಗಿರುವುದಾಗಿ ಹೇಳಿದರು.

ಐಶ್ವರ್ಯಾ ಕಥೆಯು ಕೇಳುತ್ತಿದ್ದರೆ, ಪ್ರಮುಖ ನಟರೊಂದಿಗೆ ನಟಿಸಿ ಚಿತ್ರರಂಗದಲ್ಲಿ ಎತ್ತರಕ್ಕೆ ಏರಿದ ನಟಿ ಇವರೇನಾ ಎಂದು ಯಾರಿಗಾದರೂ ಅಚ್ಚರಿಯಾಗ ದಿರದು. ಅದರೆ ಇದು ವಾಸ್ತವ. ಮೋಹನಲಾಲ್ ಜೊತೆ ಈಕೆ ನಟಿಸಿದ ಬಟರ್‌ಸ್, ನರಸಿಂಹಂ, ಪ್ರಜಾ ಮೊದಲಾದ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟಿದ್ದವು. ಆದರೆ ದಿನಕಳೆದಂತೆ ಆಕೆಯನ್ನು ನಿರ್ಮಾಪಕರು ಕಡೆಗಣಿಸುತ್ತ ಬಂದ ಪರಿಣಾಮ ಈಗ ದಯನೀಯ ಸ್ಥಿತಿಗೆ ಇಳಿದಿದ್ದಾರೆ.

ತಮ್ಮ ಬಳಿ ಹಣವಿಲ್ಲದಿದ್ದರೂ ಯಾವುದೇ ಸಾಲವಿಲ್ಲ. ಪುತ್ರಿ ವಿವಾಹವಾದ ನಂತರ ದೂರವಾಗಿದ್ದಾಳೆ ಎಂದಿರುವ ನಟಿ, ಯಾವುದಾದರೂ ಉದ್ಯೋಗ ಕೊಡಿಸಿದರೆ ಮಾಡಲು ತಾವು ಸಿದ್ಧ. ಆದರೆ ನಟಿಸಲು ಮತ್ತೊಮ್ಮೆ ಅವಕಾಶ ದೊರೆತರೆ ಅದಕ್ಕೂ ಸೈ ಎಂದಿದ್ದಾರೆ. ಚಿತ್ರರಂಗದಲ್ಲಿಸಕ್ರಿಯರಾಗಿದ್ದಾಗಲೇ1994ರಲ್ಲಿತನ್ವಿರ್‌ಅಹಮದ್‌ಎಂಬುವರನ್ನು ಐಶ್ವರ್ಯಾ ವಿವಾಹವಾಗಿದ್ದರು.

ಆದರೆ ಮೂರು ವರ್ಷಗಳ ನಂತರ ದಂಪತಿ ವಿಚ್ಛೇದನ ಪಡೆದುಕೊಂಡಿದ್ದರು. ಜೊತೆಗೆ ತಾಯಿ ಲಕ್ಷ್ಮೀ ಜೊತೆಯೂ ಆಕೆ ಸಂಬಂಧ ಕಡಿದುಕೊಂಡು ಬಹಳ ವರ್ಷಗಳೇ ಕಳೆದಿವೆ. ಚಿತ್ರರಂಗದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾಗಲೇ ಹಣಕಾಸು ಭದ್ರತೆ ಬಗ್ಗೆ ಚಿಂತಿಸದೆ ಕೊನೆಗೆ ಎಲ್ಲವನ್ನೂ ಕಳೆದುಕೊಂಡಾಗಲೇ ಜೀವನದ ಬಗ್ಗೆ ಅರಿವಾಗುವುದು ಎಂಬ ಮಾತು ನಟಿ ಐಶ್ವರ್ಯಾಗೆ ಅನ್ವಯಿಸುತ್ತದೆ.

Related Posts :

ಕೆಜಿಎಫ್-2 ಚಿತ್ರ ಬ...
ಆಗಸ್ಟ್ 20 ರಂದು ಸಲಗ ...
ಪ್ರಾಣಿಗಳ ರಕ್ಷಣೆ...
karwar Movies as on 14-03-2019

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Movies

Explore More:

About Deepika

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,470,240 visitors

Footer

JSW has proposed another port at Honavar

July 26, 2021 By Sachin Hegde

ಆದಾಯ ತೆರಿಗೆ ಇಲಾಖೆ ನೇಮಕಾತಿ 2022

August 11, 2022 By Deepika

ಸಾಗವಾನಿ ಕಟ್ಟಿಗೆ ಅಕ್ರಮ ಸಂಗ್ರಹ; ವುಡ್ ಮಿಲ್ ಜಪ್ತು

August 11, 2022 By Deepika

ಹಣಕ್ಕಾಗಿ ಹೊನ್ನಾವರದ ಉದ್ಯಮಿಗೆ ಬ್ಲ್ಯಾಕ್ ಮೇಲ್ : ಆರೋಪಿಗಳು ಪೊಲೀಸರ ವಶಕ್ಕೆ

August 11, 2022 By Deepika

ಕರಡಿ ದಾಳಿ; ವ್ಯಕ್ತಿ ಸ್ಥಳದಲ್ಲೇ ಸಾವು

August 11, 2022 By Deepika

ಹೆಡ್ ಕಾನ್ಸ್ ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ 2022

August 11, 2022 By Deepika

ಸ್ವಯಂ ಉದ್ಯೋಗ, ನೀರಾವರಿ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

August 10, 2022 By Deepika

© 2022 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.