ಹೊನ್ನಾವರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್. ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಂದು ಸಂಘದ ತಾಲೂಕು ಶಾಖೆಯ ಅಧ್ಯಕ್ಷ ರಾಜಕುಮಾರ ಟಿ. ನಾಯ್ಕ ತಿಳಿಸಿದ್ದಾರೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮಕ್ಕಳ ತಂದೆ, ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ರಾಜ್ಯ ಸರ್ಕಾರದ ಖಾಯಂ ನೌಕರರಾಗಿರಬೇಕು. ಈ ಬಗ್ಗೆ ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿ ತಾಲೂಕು ಶಾಖೆ ಅಧ್ಯಕ್ಷರು ಸೇವಾ ದೃಢೀಕರಣ ಪ್ರಮಾಣದ ಪತ್ರದ ನಮೂನೆಯಲ್ಲಿ ದೃಢೀಕರಣ ನೀಡಬೇಕು.
ತಾಲೂಕು ಶಾಖೆಯ ಅಧ್ಯಕ್ಷರ ದೃಢೀಕರಣ ಪತ್ರವಿಲ್ಲದೆ ಆನ್ಲೈನ್ ಮೂಲಕ ಸಲ್ಲಿಸಲ್ಪಡುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು. ಆನ್ ಲೈನ್ ಅರ್ಜಿಯನ್ನುhttps://bit.ly/ksgeaprathibapuras kara2022 ಗೆ ಕಳಿಸಬೇಕು. ಅರ್ಜಿ ಸಲ್ಲಿಸಲು ದಿನಾಂಕ 15/07/2022 ಅಂತಿಮ ದಿನಾಂಕವಾಗಿದ್ದು ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.
Leave a Comment