
ಯಲ್ಲಾಪುರ : ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಾಗಿ ಬಾಲಗೋಪಾಲ ಸ್ಪರ್ಧೆಯನ್ನು ನರ್ಸರಿ, ಎಲ್ ಕೆ ಜಿ. ಹಾಗೂ ಯು ಕೆ ಜಿ ತರಗತಿಯ ಮುದ್ದು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ
ಡಾ. ದತ್ತಾತ್ರೇಯ ಗಾಂವ್ಕರ್ ಮಾತನಾಡಿ ಮಕ್ಕಳಲ್ಲಿ ಸ್ಪರ್ಧೆಯ ಮೂಲಕ ಆಸಕ್ತಿಯನ್ನು ಹುಟ್ಟಿಸುವ ಹಾಗೂ ತಮ್ಮ ಪ್ರತಿಭೆಯನ್ನು ತೋರಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ ಹೊಣೆಯಾಗಿದೆ.ನಮ್ಮ ಸಂಸ್ಥೆಯಲ್ಲಿ ಇಂತಹ ಅವಕಾಶಗಳನ್ನು ಸೃಷ್ಟಿಸುತ್ತಲೇ ಇದ್ದೇವೆ. ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸ್ಪರ್ಧೆಯಲ್ಲಿ ಒಟ್ಟು 52 ಮುದ್ದು ವಿದ್ಯಾರ್ಥಿಗಳು ಬಾಲಗೋಪಾಲ ವೇಷಧರಿಸಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು.
ಬಾಲಗೋಪಾಲ ವೇಷ ಸ್ಪರ್ಧೆಯಲ್ಲಿ ವಿಜೇತರಾಗಿ
ನರ್ಸರಿ ವಿಭಾಗದಲ್ಲಿ
ತಕ್ಷ ನಾಯಕ- ಪ್ರಥಮ
ಸ್ಮೃತಿ ದೇವದಾಸ -ದ್ವಿತೀಯ
ಧೀಮಹಿ ಗೌತಮ್-ತೃತೀಯ ಸ್ಥಾನ ಗಳಿಸಿದರು.
ಎಲ್ ಕೆ ಜಿ. ವಿಭಾಗದಲ್ಲಿ
ಸಾನ್ವಿಕಾ ಪಿ ಹೆಗಡೆ- ಪ್ರಥಮ
ವಿಮರ್ಶಯಶ್ _ ದ್ವಿತೀಯ
ಆಧ್ಯಲಕ್ಷ್ಮಿ ಭಟ್ಟ _ ತೃತೀಯ
ಸ್ಥಾನ ಪಡೆದರು.
ಯು ಕೆ ಜಿ ವಿಭಾಗದಲ್ಲಿ
ಅಪೇಕ್ಷಾ. ಎಸ್.ಭಟ್_ ಪ್ರಥಮ
ಅಥರ್ವ ಕೋಣೆಮನೆ ಹಾಗೂ ಸಿರಿ ಎನ್ ಭಟ್_ ದ್ವಿತೀಯ
ಆತ್ವಿ ಜಿ ದೇವಡಿಗ _ ತೃತೀಯ ಸ್ಥಾನ ಗಳಿಸಿದರು.
ವೇದಿಕೆಯಲ್ಲಿ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕಗುರುರಾಜ ಕುಂದಾಪುರ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಉಪಸ್ಥಿತರಿದ್ದರು.
ನಿರ್ಣಾಯಕರಾಗಿ
ಡಾ .ದತ್ತಾತ್ರೇಯ ಗಾವ್ಕರ್, ಪ್ರಸನ್ನ ಹೆಗಡೆ ,
ಶ್ಯಾಮಲಾ ಕೆರೆಗೆದ್ದೆ .ಕಾರ್ಯ ನಿರ್ವಹಿಸಿದರು.ಶಿಕ್ಷಕಿ ಉಷಾ ಭಟ್ ನಿರ್ವಹಿಸಿದರು. ಶಿಕ್ಷಕಿ ಮಿಲಾಗ್ರಿನ ಸ್ವಾಗತಿಸಿದರು.ಅಸ್ಮಾ ಶೇಖ್ ವಂದಿಸಿದರು.
Leave a Comment