ಹೊನ್ನಾವರ: ತಾಲೂಕಿನ ಕೆರೆಕೋಣ ಗ್ರಾಮದ ಭಾರತಿ ಶೆಟ್ಟಿ ಎನ್ನುವವರಿಗೆ ಹಲ್ಲೆ ಮಾಡಿದ್ದ ಆರೋಪಿ ಗಣೇಶ ಶೆಟ್ಟಿ ಎನ್ನುವಾತನಿಗೆ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶ ಚಂದ್ರಶೇಖರ್ ಇ.ಬಣಕಾರ ರವರು ವಿಚಾರಣೆ ನಡೆಸಿ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 341ಕ್ಕೆ 1 ತಿಂಗಳ ಸಾದಾ ಜೈಲುವಾಸ, ಕಲಂ 323ಕ್ಕೆ 6 ತಿಂಗಳ ಜೈಲುವಾಸ, ಕಲಂ 324 ಕ್ಕೆ 8 ತಿಂಗಳ ಜೈಲುವಾಸ, ಕಲಂ 504 ಕ್ಕೆ 6 ತಿಂಗಳ ಜೈಲುವಾಸ, ಕಲಂ 506 ಕ್ಕೆ 6 ತಿಂಗಳ ಜೈಲುವಾಸ ಶಿಕ್ಷೆ ವಿಧಿಸಿದ್ದಾರೆ.
ಆರೋಪಿತ ಕಳೆದ ವರ್ಷ ಡಿ.7ರಂದು ಕೆರೆಕೋಣ ಗ್ರಾಮದ ಭಾರತಿ ಶೆಟ್ಟಿ ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದನು.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪ್ರಕರಣವನ್ನು ಪಿಎಸೈ ಮಹಾಂತೇಶ ನಾಯಕ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಲಯಕ್ಕೆ ಸಲ್ಲಿಸಿದ್ದರು.
ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ವಕೀಲರಾದ ಸಂಪದಾ ಗುನಗಾ ಈ ಪ್ರಕರಣದಲ್ಲಿ 8 ಜನ ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು.
Leave a Comment