ಹೊನ್ನಾವರ : ಪಟ್ಟಣದ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯಪ್ರಾಣ ಮೊಬೈಲ್ ಅಂಗಡಿಯಲ್ಲಿ ಎಸ್. ಎಸ್. ಎಲ್. ಸಿ ಓದುತ್ತಿರುವ ಬಾಲಕಟು ಮೊಬೈಲ್ ಕದ್ದ ಪ್ರಕರಣ ನಡೆದಿದೆ.
ಮೊಬೈಲ್ ಅಂಗಡಿಗೆ ರವಿವಾರದಂದು ಬಂದಿದ್ದ ಇಬ್ಬರು ಹುಡುಗರು ಮೊಬೈಲ್ ಕವರ್ ಕೊಳ್ಳುವ ನೆಪದಲ್ಲಿ ಮಾಲಿಕರಿಗೆ ಗೊತ್ತಾಗದ ರೀತಿಯಲ್ಲಿ ಅಂಗಡಿಯಲ್ಲಿದ್ದ ರಿಯಲ್ ಮಿ ಸಿ – 35 ಮೊಬೈಲ್ ಫೋನ್ ಹಾಗೂ ಡೊಂಗಲ್ ನ್ನು ಕಳವು ಮಾಡಿಕೊಂಡು ಹೋಗಿದ್ದರು, ಮೊಬೈಲ್ ಅಂಗಡಿ ಮಾಲಿಕ ಹಾಡಗೇರಿ ಮುಟ್ಟಾದ ಯೋಗೇಶ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು.
ಮೊಬೈಲ್ ಕದ್ದು ಪರಾರಿಯಾಗಿದ್ದ ಆರೋಪಿಗಳು ಕುಮಟಾದವರಾಗಿದ್ದು, ಈಗಹಷ್ಟೇ ಎಸ್ ಎಸ್ ಎಲ್ ಸಿ ಓದುತ್ತಿರುವ ಬಾಲಕರು ಎಂದು ತಿಳಿದು ಬಂದಿದೆ.
ಸೋಮವಾರ ಹೊನ್ನಾವರ ಪೊಲೀಸರು ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕಳೆದ ರವಿವಾರ ಇವರು ಅಂಕೋಲಾದಲ್ಲಿಯೂ ಮೊಬೈಲ್ ಕಳ್ಳತನ ಮಾಡಿದ್ದರು. ಚಿಕಪ್ಪನ ಬೈಕ್ ತೆಗೆದುಕೊಂಡು ಅದರಲ್ಲಿ ಪ್ರಯಾಣ ಮಾಡಿ ಮೊಬೈಲ್ ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ.
ತಮ್ಮ ತಾಲೂಕು ಬಿಟ್ಟು ಅಕ್ಕಪಕ್ಕದ ತಾಲೂಕನ್ನೆ ಈ ಬಾಲಪರಾಧಿಗಳು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ವ್ಯಾಪಾರದ ಸೋಗಿನಲ್ಲಿ ಹೋಗಿ ಅಂಗಡಿಯವರ ಕಣ್ಣು ತಪ್ಪಿಸಿ ಕದ್ದು ಪರಾರಿಯಾಗುತ್ತಿದ್ದರು. ಪ್ರಕರಣ ಬೆನ್ನು ಹತ್ತಿದ ಹೊನ್ನಾವರ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ. ಬಾಲಾಪರಾಧಿಗಳನ್ನು ರಿಮಾಂಡ್ ಹೋಮ್ ಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.
Leave a Comment