• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೇರಳದಲ್ಲಿ ನಡೆದ ಅಕಾಡೆಮಿ ಕಾರ್ಯಾಗಾರದಲ್ಲಿ ಉಮೇಶ ಮುಂಡಳ್ಳಿ ಭಾವಗೀತೆ ಲೋಕಾರ್ಪಣೆ

September 26, 2022 by Deepika Leave a Comment

ಭಟ್ಕಳ- ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು , ಕಾಸರಗೊಡು ಜಿಲ್ಲಾ ಲೇಖಕರ ಸಂಘ ಹಾಗೂ ಶಂಕರಾಚಾರ್ಯ ಸಂಸ್ಥಾನ ಮಠ ಕಾಸರಗೋಡು ಇವರು ಮೂರು ದಿನಗಳ ಕಾಲ ಕೇರಳ ರಾಜ್ಯದ ಕಾಸರಗೋಡಿನ ಎಡನೀರು ಮಠಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಕಾವ್ಯ ಕಾರ್ಯಾಗಾರದಲ್ಲಿ ಜಿಲ್ಲೆಯ ಭಾವ ಕವಿ ಉಮೇಶ ಮುಂಡಳ್ಳಿ ಅವರ ಹೊಸ ಭಾವಗೀತೆ ಇಂದು ಲೋಕಾರ್ಪಣೆ ಗೊಂಡಿದೆ.

WhatsApp Image 2022 09 25 at 22.23.48


ಮುಂಡಳ್ಳಿಯವರು ಸಾಹಿತ್ಯ ರಚಿಸಿ ಸ್ವರಸಂಯೋಜನೆ ಮಾಡಿ ಹಾಡಿರುವ ಹೊಸ ಭಾವಗೀತೆ ಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೋ.ಬಿ.ವಿ.ವಸಂತ ಕುಮಾರ್ ಅವರು ನಿನಾದ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಅವರು ಸಾಹಿತ್ಯ ಸಂಗೀತ ಒಬ್ಬರಲ್ಲಿಯೇ ಅಡಕವಾಗುವುದು ತುಂಬಾ ವಿರಳ. ಆದರೆ ಉಮೇಶ ಅವರು ಇಂತ ಸಾಧ್ಯತೆಗಳಿಂದ ನಮ್ಮ ಮುಂದಿರುವುದು ವಿಶೇಷವಾಗಿದೆ ಎಂದು ಅವರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿ ಕನ್ನಡ ಸಾಹಿತ್ಯ ಪರಂಪರೆ ನಿಂತ ನೀರಲ್ಲ ಸದಾ ಬದಲಾವಣೆಗಳೊಂದಿಗೆ ಹೊಸತನಕ್ಕೆ ತೆರೆದುಕೊಳ್ಳುತ್ತಾ ಸಾಗುತ್ತದೆ.ಇಂದು ಕಲೆ ಸಾಹಿತ್ಯ ಸಂಗೀತ ಮೇಳೈಸಿ ಕೊಂಡು ತಮ್ಮದೇ ಶೈಲಿಯಲ್ಲಿ ಕಾವ್ಯ ರಚಿಸಿ ಹಾಡುವ ಉಮೇಶ ಮುಂಡಳ್ಳಿ ಒಂದು ಉದಾಹರಣೆ ಯಾಗಿದ್ದಾರೆ.ಮುಂದಿನ ದಿನಗಳಲ್ಲಿ ಅವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನಷ್ಟು ಕೊಡಗೆ ಸಲ್ಲಲಿ ಎಂದರು.

ವೇದಿಕೆಯಲ್ಲಿ ಕವಿ ನಾಗರಾಜ ತಲಕಾಡು, ಕೇರಳ ಕಾಸರಗೋಡು ಲೇಖಕರ ಸಂಘದ ಕಾರ್ಯದರ್ಶಿ ಪಿ.ಎನ್ .ಮುಳಿತ್ತಾಯ ,ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಉಮೇಶ ಮುಂಡಳ್ಳಿ ಅವರು ಈಗಾಗಲೇ ಹತ್ತು ಹಲವಾರು ತಮ್ಮ ಭಾವಗೀತೆಗಳಿಗೆ ಸ್ವರ ಸಂಯೋಜನೆ ಮಾಡಿರುವುದರ ಜೊತೆಗೆ ಅನೇಕ ಕವಿಗಳ ಗೀತೆಗಳನ್ನು ಸ್ವರಸಂಯೋಜನೆ ಮಾಡಿ ಹಾಡಿರುತ್ತಾರೆ.ಅನೇಕ ದೇವಾಲಯಗಳ ಭಕ್ತಿಗೀತೆಗಳನ್ನು ಸಹ ಹಾಡಿ ಬಿಡುಗಡೆಗೊಳಿಸಿದವರಾಗಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯ ಹೊರರಾಜ್ಯಗಳಿಂದ ಅನೇಕ ಯುವ ಕವಿಗಳು ಸಂಶೋದನಾ ವಿದ್ಯಾರ್ಥಿಗಳು ಉಪನ್ಯಾಸಕರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಅಪ್ರೆಂಟಿಸ್ ಮೇಳ ಸೆ. 26 ರಂದು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News

Explore More:

About Deepika

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...