ಕಾರವಾರ : ತನ್ನ ಮಗನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ 1.96 ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ತಮ್ಮ ಸಂಬAಧಿಯ ಮೇಲೆ ಪೊಲೀಸ್ ದೂರು ನೀಡಿದ್ದಾರೆ.
ನಗರದ ಕಾಜುಭಾಗದ ಶಾಂತಿಪ್ರಿಯಾ ನಾಯ್ಕ ವಂಚನೆಗೆ ಒಳಗಾದವರು ತಮ್ಮ ಸಂಬಧಿ ಅಕ್ಷತಾ ನಾಯ್ಕ ಅವರ ವಿರುದ್ಧ ದೂರು ನೀಡಿದ್ದಾರೆ. ಅಕ್ಷತಾ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.
ಅಲ್ಲದೇ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಶಿಪ್ರಾರೈ ಹಾಗೂ ಶಿಶಿರ ಶೆಟ್ಟಿಯವರ ಪರಿಚಯವಿದ್ದು, ಅಲ್ಲಿ ನಿನ್ನ ಮಗನಿಗೆ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿ ತರಬೇತಿಯ ನೆಪದಲ್ಲಿ ಮೊದಲು ಶಾಂತಿಪ್ರಿಯಾಳಿAದ 80 ಸಾವಿರ ಪಡೆದುಕೊಂಡಿದ್ದಾರೆ.
ಕAಪನಿಯ ಇ-ಮೇಲ್ ನಿಂದ ಕೆಲವು ದಾಖಲೆಗಳನ್ನು ಕಳುಹಿಸಿ, ಬಳಿಕ ಮತ್ತೆ ಹೆಚ್ಚುವರಿಯಾಗಿ ಒಮ್ಮೆ 30 ಹಾಗೂ ಇನ್ನೊಮ್ಮೆ 86 ಸಾವಿರ ರೂ. ಪಡೆದಿದ್ದು, ಒಟ್ಟೂ 1.96 ಲಕ್ಷ ರೂ. ವಂಚನೆ ಮಾಡಲಾಗಿದೆ. ಎಂದು ನಗರ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment