ಹಳಿಯಾಳ: ಹಳಿಯಾಳ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಏನೋ ಏರಲಿದೆ ಆದರೇ, ಸಚಿವ ಆರ್.ವಿ.ದೇಶಪಾಂಡೆ ಅವರ ಸ್ವಕ್ಷೇತ್ರ ಅವರು ನಿವಾಸ ಹೊಂದಿರುವ ವಾರ್ಡನಲ್ಲೇ ಕಾಂಗ್ರೇಸ್ ಅಭ್ಯರ್ಥಿ ಸೋಲನುಭವಿಸಿದ್ದು ಹಳಿಯಾಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಟ್ಟಣದ ವಾರ್ಡ ನಂ14- ಮುಖ್ಯಬೀದಿಯನ್ನು ಒಳಗೊಂಡಿದ್ದು ಇಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರ ನಿವಾಸವು ಇದೆ. ಇದೇ ವಾರ್ಡನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸತ್ಯಜೀತ ಗಿರಿ ಈ ಹಿಂದೆ … [Read more...] about ಸಚಿವರ ವಾರ್ಡನಲ್ಲೇ ಕಾಂಗ್ರೇಸ್ ಅಭ್ಯರ್ಥಿ ಸೋಲು – ಬಿಜೆಪಿಗೆ ಗೆಲುವು.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳ ಪುರಸಭೆ ಚುನಾವಣೆ ಫಲಿತಾಂಶ 14 -ಕಾಂಗ್ರೇಸ್, ಬಿಜೆಪಿ-7, ಪಕ್ಷೇತರ-1 ಹಾಗೂ ಜೆಡಿಎಸ್-1
ಹಳಿಯಾಳ: ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಆ.31 ರಂದು ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, 14 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕಾಂಗ್ರೇಸ್ ಅತಿದೊಡ್ಡ ಪಕ್ಷವಾಗಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಶೂನ್ಯದಿಂದ 7 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿ ಪಕ್ಷ ಪ್ರಥಮ ಬಾರಿಗೆ ಪುರಸಭೆ ಪ್ರವೇಶಿಸಿದೆ. ಹೀನಾಯ ಸೋಲುಂಡಿರುವ ಜೆಡಿಎಸ್ ಪಕ್ಷ ಒಂದು ಸ್ಥಾನ ಹಾಗೂ ಒರ್ವ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬಿರಿದ್ದಾರೆ. ಕಾಂಗ್ರೇಸ್ ಹಾಗೂ ಬಿಜೆಪಿ ತಲಾ … [Read more...] about ಹಳಿಯಾಳ ಪುರಸಭೆ ಚುನಾವಣೆ ಫಲಿತಾಂಶ 14 -ಕಾಂಗ್ರೇಸ್, ಬಿಜೆಪಿ-7, ಪಕ್ಷೇತರ-1 ಹಾಗೂ ಜೆಡಿಎಸ್-1
ಬಿಜೆಪಿ ಪಕ್ಷವನ್ನು ಅಲ್ಪಸಂಖ್ಯಾತ ಸಮುದಾಯದವರು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿರುವುದು ಖೇದಕರ – ಸುನೀಲ್ ಹೆಗಡೆ.
ಹಳಿಯಾಳ: ಅಲ್ಪಸಂಖ್ಯಾತ ಸಮುದಾಯದವರನ್ನು ಎಷ್ಟೇ ವಿಶ್ವಾಸಕ್ಕೂ ತೆಗೆದುಕೊಂಡರು ಅವರು ತಮ್ಮ ಹಳೇ ಚಾಳಿಯನ್ನು ಬಿಟ್ಟಿಲ್ಲ, ಬಿಜೆಪಿ ಪಕ್ಷವನ್ನು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಪುರಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿ ಪಕ್ಷವನ್ನು ಜಾತಿ, ಧರ್ಮದ ಆಧಾರದ ಮೇಲೆ ನೇರಾ ನೇರವಾಗಿ ವಿರೋಧಿಸುತ್ತಿರುವುದು … [Read more...] about ಬಿಜೆಪಿ ಪಕ್ಷವನ್ನು ಅಲ್ಪಸಂಖ್ಯಾತ ಸಮುದಾಯದವರು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿರುವುದು ಖೇದಕರ – ಸುನೀಲ್ ಹೆಗಡೆ.
ಜನರ ತೀರ್ಪಿಗೆ ತಲೆ ಬಾಗುತ್ತೇವೆ. ಆದರೇ ಜನರು ಅಭಿವೃದ್ದಿ ಪರ ಇದ್ದಾರೋ, ಇಲ್ಲವೋ ಸಂಶಯ ಮೂಡುತ್ತಿದೆ- ಎಸ್.ಎಲ್.ಘೊಟ್ನೇಕರ
ಹಳಿಯಾಳ: ಜನರು ಅಭಿವೃದ್ದಿ ಪರ ಇದ್ದಾರೋ, ಇಲ್ಲವೋ ? ಎನ್ನುವ ಸಂಶಯ ತಮಗೆ ಮೂಡುತ್ತಿದೆ ಆದರೂ ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ. ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸುತ್ತಿದ್ದಂತೆ ತುರ್ತಾಗಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಆರ್.ವಿ.ದೇಶಪಾಂಡೆ ಅವರ ಅಭಿವೃದ್ದಿ ಕಾರ್ಯಗಳು, ಪರಿಶ್ರಮ, ಅಭಿವೃದ್ದಿ ಪರ ನಿಲುಮೆಯೇ ಇಂದು ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆಯಲ್ಲಿ … [Read more...] about ಜನರ ತೀರ್ಪಿಗೆ ತಲೆ ಬಾಗುತ್ತೇವೆ. ಆದರೇ ಜನರು ಅಭಿವೃದ್ದಿ ಪರ ಇದ್ದಾರೋ, ಇಲ್ಲವೋ ಸಂಶಯ ಮೂಡುತ್ತಿದೆ- ಎಸ್.ಎಲ್.ಘೊಟ್ನೇಕರ
ಕಾಂಗ್ರೇಸ್ ಸದಸ್ಯ ಸುರೇಶ್ ತಳವಾರ್ ಹ್ಯಾಟ್ರಿಕ್, ಪುರಸಭೆಗೆ ಎಂಟ್ರಿಕೊಟ್ಟ ಅತಿ ಕಿರಿಯ ವಯಸ್ಸಿನ ಯುವಕ ನವೀನ್.
ಹಳಿಯಾಳ: ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಮೂವರು ಹಳಬರನ್ನು ಹೊರತು ಪಡಿಸಿದರೇ 19 ಜನ ಹೊಸ ಮುಖಗಳು ಪಾದಾರ್ಪಣೆ ಮಾಡಿವೆ. ಪಟ್ಟಣದ ವಾರ್ಡ ನಂ-3 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಅದೃಷ್ಠ ಪರೀಕ್ಷೆಗೆ ಇಳಿದಿದ್ದ ನವೀನ ಕಾಟಕರ ವಿಜಯ ಸಾಧಿಸಿ ಅತಿ ಕಿರಿಯ(25 ವರ್ಷ) ವಯಸ್ಸಿನ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾನೆ. ಇನ್ನೂ ಕಾಂಗ್ರೇಸ್ಸಿನಿಂದ ಸುರೇಶ ತಳವಾರ ಸತತ 3 ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧಿಸಿದರೇ, ಶಂಕರ ಬೆಳಗಾಂವಕರ 3 ಬಾರಿ ಆಯ್ಕೆಯಾಗಿ ದಾಖಲೆ … [Read more...] about ಕಾಂಗ್ರೇಸ್ ಸದಸ್ಯ ಸುರೇಶ್ ತಳವಾರ್ ಹ್ಯಾಟ್ರಿಕ್, ಪುರಸಭೆಗೆ ಎಂಟ್ರಿಕೊಟ್ಟ ಅತಿ ಕಿರಿಯ ವಯಸ್ಸಿನ ಯುವಕ ನವೀನ್.


