ಹಳಿಯಾಳ: ಅಲ್ಪಸಂಖ್ಯಾತ ಸಮುದಾಯದವರನ್ನು ಎಷ್ಟೇ ವಿಶ್ವಾಸಕ್ಕೂ ತೆಗೆದುಕೊಂಡರು ಅವರು ತಮ್ಮ ಹಳೇ ಚಾಳಿಯನ್ನು ಬಿಟ್ಟಿಲ್ಲ, ಬಿಜೆಪಿ ಪಕ್ಷವನ್ನು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಪುರಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿ ಪಕ್ಷವನ್ನು ಜಾತಿ, ಧರ್ಮದ ಆಧಾರದ ಮೇಲೆ ನೇರಾ ನೇರವಾಗಿ ವಿರೋಧಿಸುತ್ತಿರುವುದು ಮತ್ತೊಮ್ಮೆ ಹಳಿಯಾಳದಲ್ಲಿ ಸಾಬೀತಾಗಿದೆ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೆಚ್ಚು ಮತಗಳನ್ನು ಪಡೆದಿದ್ದ ಬಡಾವಣೆಗಳಲ್ಲಿ ಮಾತ್ರ ಬಿಜೆಪಿ ವಿಜಯ ಸಾಧಿಸಿದೆ. ಜಾತಿ ಆಧಾರದ ಮೇಲೆ ಒಡೆದು ಆಳುವ ನೀತಿ ಹೊಂದಿರುವ ಕಾಂಗ್ರೇಸ್ ಪರ ಹೆಚ್ಚು ಮತ ಬಿದ್ದಿರುವ ವಾರ್ಡಗಳಲ್ಲಿಯೇ ಕಾಂಗ್ರೇಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಇದಕ್ಕೆ ಪುಷ್ಠಿಯಾಗಿದೆ.
ಬಿಜೆಪಿ ಪಕ್ಷ ರಾಷ್ಟ್ರದ ಸರ್ವಾಂಗೀಣ ಅಭಿವೃದ್ದಿಗೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾತ್ಯಾತೀತವಾಗಿ ದುಡಿಯುವ ಪಕ್ಷವಾಗಿದೆ. ಅಲ್ಲದೇ ಅಲ್ಪಸಂಖ್ಯಾತರನ್ನು ಎಷ್ಟೇ ವಿಶ್ವಾಸಕ್ಕೆ ತೆಗೆದುಕೊಂಡು ತಿಳಿಸಿ ಹೇಳಿದರು ಅವರು ಧರ್ಮದ ಆಧಾರದ ಮೇಲೆ ನೇರವಾಗಿ ಬಿಜೆಪಿಯನ್ನು ತೀರಸ್ಕರಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಅಲ್ಪಸಂಖ್ಯಾತರ ಈ ಧೋರಣೆಯನ್ನು ಬಹುಸಂಖ್ಯಾತರು ಅರಿಯಬೇಕು ಅಲ್ಲದೇ ಬಹುಸಂಖ್ಯಾತರ ಮೇಲೆ ಅಲ್ಪಸಂಖ್ಯಾತರು ಸವಾರಿ ಮಾಡೋ ದಿನ ದೂರು ಉಳಿದಿಲ್ಲ ಅದಕ್ಕೂ ಮುನ್ನ ಬಹುಸಂಖ್ಯಾತರು ಜಾಗೃತರಾಗಬೇಕೆಂದು ಸುನೀಲ್ ಹೆಗಡೆ ಹೇಳಿದರು.
Leave a Comment