ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಐದನೇ ದಿನ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಕೊನೆಯ ದಿನದ ಸಮಾರಂಭದ ಸಭಾಸದರು, ಕಲಾವಿದರು, ಕಲಾಪೆÇೀಷಕರು ಮತ್ತು ಊರ ನಾಗರಿಕರೊಂದಿಗೆ ಮೆರವಣಿಗೆಯ ಮೂಲಕ ಬಯಲು ರಂಗಮಂದಿರಕ್ಕೆ ತಲುಪಿ, ಯಕ್ಷಗಾನ ಶೈಲಿಯಲ್ಲಿ ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು.ಸರ್ವರನ್ನು ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಈ ದಿನದ ಕಾರ್ಯಕ್ರಮವನ್ನು ದಿ. ಹೊಸ್ತೋಟ … [Read more...] about ಐದನೇ ದಿನದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಆಕಸ್ಮಿಕ ಬೆಂಕಿ : ಪ್ರಾಣಾಪಾಯದಿಂದ ಪಾರು
ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿಯಲ್ಲಿ ತಡರಾತ್ರಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಡರಾತ್ರಿ ಸಂಭವಿಸಿದೆ.ಕೆಳಗಿನ ಇಡಗುಂಜಿ ಅಣ್ಣಯ್ಯ ಗೌಡ ಅವರ ಮನೆ ಬೆಂಕಿಗೆ ಆಹುತಿಯಾಗಿದೆ. ಇವರದ್ದು ಅವಿಭಕ್ತಕುಟುಂವಾಗಿದ್ದು, ಮನೆಯಲ್ಲಿ ಸುಮಾರು30ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಎಲ್ಲರೂ ನಿನ್ನೆ ರಾತ್ರಿ ಊಟ ಮಾಡಿ ನಿದ್ದೆಗೆ ಜಾರಿದ್ದರು. … [Read more...] about ಆಕಸ್ಮಿಕ ಬೆಂಕಿ : ಪ್ರಾಣಾಪಾಯದಿಂದ ಪಾರು
ಸಾಹಿತ್ಯ ಸೇವಾ ದುರಂಧರ ರಾಜ್ಯ ಪ್ರಶಸ್ತಿಗೆ ಸಂದೀಪ ಭಟ್ಟ ಆಯ್ಕೆ.
ಹೊನ್ನಾವರ: ಅತ್ಯುತ್ತಮ ಸಂಘಟನಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಸಂಗೀತ ಭಾರತಿ ಹೊಸಪೇಟೆ ಇವರು ನೀಡುವ ರಾಜ್ಯ ಮಟ್ಟದ ಸಾಹಿತ್ಯ ಸೇವಾ ದುರಂಧರ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಯುವ ಸಾಹಿತಿ ಶಿಕ್ಷಕ ಶ್ರೀ ಸಂದೀಪ ಭಟ್ಟ ಭಾಜನರಾಗಿದ್ದಾರೆ.3/02/2020 ರಂದು ಹೊಸಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆದಿಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು ಚಿತ್ತವಾಡಿ, ಹೊಸಪೇಟೆ ಇದರ ಸಂಸ್ಥಾಪಕರೂ ಹಾಗೂ ವ್ಯವಸ್ಥಾಪಕ … [Read more...] about ಸಾಹಿತ್ಯ ಸೇವಾ ದುರಂಧರ ರಾಜ್ಯ ಪ್ರಶಸ್ತಿಗೆ ಸಂದೀಪ ಭಟ್ಟ ಆಯ್ಕೆ.
ಮಹಾಶಿವರಾತ್ರಿಯ ತಾಲೂಕಿನ ವಿವಿಧ ಶಿವ ಮಂದಿರದಲ್ಲಿ ಭಕ್ತರು ಬಿಲ್ವಪತ್ರೆಸಮೇತ ವಿವಿಧ ಅಭಿಷೇಕದಲ್ಲಿ ಪಾಲ್ಗೊಂಡರು.
ಶಿವನ ಆರಾಧನೆಯ ದಿನವಾಗಿ ಗುರುತಿಸಲ್ಪಟ್ಟಿರುವ ಮಾಘಮಾಸದ ಬಹುಳ ಚತುರ್ದಶಿಯನ್ನು ಮಹಾಶಿವರಾತ್ರಿಯನ್ನು ಆಚರಣೆ ಸಡಗರ ಸಂಭ್ರಮದಿಂದ ಹೊನ್ನಾವರ ತಾಲೂಕಿನ ಎಲ್ಲಡೆ ನಡೆಯಿತು. ಪಂಚಕ್ಷೇತ್ರಗಳಲ್ಲೊಂದೆನಿಸಿರುವ ಗುಣವಂತೆಯ ಶಂಭುಲಿಂಗೇಶ್ವರನ ಸನ್ನಿಧಿ ಶಿವರಾತ್ರಿ ಆಚರಣೆಗೆ ತಾಲೂಕಿನಲ್ಲೆ ಪ್ರಸಿದ್ಧವೆನಿಸಿದೆ. ದೇವಾಲಯದ ಮುಂಭಾಗದಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ನಿವಾರಣೆಯಾಗಲಿದೆ ಎನ್ನುವ ಪ್ರತಿತಿ ಇದೆ. ಶಿವರಾತ್ರಿಯ ನಿಮಿತ್ತ ಬೆಳಿಗ್ಗೆಯಿಂದಲೇ ಭಕ್ತರು … [Read more...] about ಮಹಾಶಿವರಾತ್ರಿಯ ತಾಲೂಕಿನ ವಿವಿಧ ಶಿವ ಮಂದಿರದಲ್ಲಿ ಭಕ್ತರು ಬಿಲ್ವಪತ್ರೆಸಮೇತ ವಿವಿಧ ಅಭಿಷೇಕದಲ್ಲಿ ಪಾಲ್ಗೊಂಡರು.
ಕಡ್ನೀರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶಿವರಾತ್ರಿಯ ಪ್ರಯುಕ್ತ ವಿವಿಧ ಸೇವೆ
ಹೊನ್ನಾವರ: ಪಂಚಪಾಂಡವರ ಕಾಲದಲ್ಲಿ ನಿರ್ಮಿತವಾದ ಪೌರಾಣಿಕ ಐತಿಹ್ಯ ಹೊಂದಿರುವ ಕಡ್ನೀರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆಯಿಂದ ಶ್ರೀ ದೇವರಿಗೆ ಜಲಾಭಿಷೇಕ, ಕ್ಷೀರಾಭಿಷೇಕ ಮಧ್ಯಾಹ್ನದ ವರೆಗೆ ನಿರಂತರವಾಗಿ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವರಿಗೆ ಹಣ್ಣು-ಕಾಯಿ ಸೇವೆ, ಪಂಚಖಾದ್ಯ, ಬಿಲ್ವಾರ್ಚನೆ ಇತ್ಯಾದಿ ಸೇವೆ ಸಲ್ಲಿಸಿ ಕೃತಾರ್ಥರಾದರು. … [Read more...] about ಕಡ್ನೀರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶಿವರಾತ್ರಿಯ ಪ್ರಯುಕ್ತ ವಿವಿಧ ಸೇವೆ




